ನಾವು ಯಾವ ಒಳ್ಳೆಯ ಆಹಾರವನ್ನು ಸೇವಿಸುತ್ತೇವೋ ಅದೊಂದೇ ಆರೋಗ್ಯ ವರ್ಧನೆಗೆ ಕಾರಣವಲ್ಲ.
ನಾವು ಏನನ್ನು ಯೋಚಿಸುತ್ತೇವೆ ಮತ್ತು ಮಾತಾಡುತ್ತೇವೆ ಎಂಬುದೂ ಒಳ್ಳೆಯ ಆರೋಗ್ಯದ ಲಕ್ಷಣಗಳೇ.
ಹೀಗಾಗಿ ಯಾವತ್ತೂ ಒಳ್ಳೆಯ, ಸಕಾರಾತ್ಮಕ ಯೋಚನೆಗಳನ್ನು ಮಾಡೋಣ.
Share On
15
ಕಾಗೆ ಹೇಳುತ್ತದಂತೆ ಬದುಕಿದ್ದಾಗ ನನ್ಮನ್ನು ಓಡಿಸುತ್ತಿದ್ದ ವ್ಯಕ್ತಿ ಆತ ಸತ್ತ ಮೇಲೆ ನನಗಾಗಿ ಕಾದನಂತೆ ಅದಕ್ಕೆ ಹೇಳುವುದು ನಮಗೂ ಒಳ್ಳೆಯ ಕಾಲ ಬರುತ್ತದೆ.... ಎಂದು
ಜೀವನದಲ್ಲಿ ಯಾವುದಕ್ಕೂ ಚಿಂತೆ ಮಾಡಿ ಕೊರಗಬಾರದು,
ಒಳ್ಳೆಯದಾದರೆ ಅದ್ಬುತ ಎಂದು ಭಾವಿಸಬೇಕು,
ಕೆಡಕಾದರೆ ಅನುಭವ ಎಂದು ಪರಿಗಣಿಸಬೇಕು.
Share On
16
ನಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದರೆ ಯಾರ ಮುಂದೆಯೂ ತಲೆ ತಗ್ಗಿಸುವ ಅವಶ್ಯಕತೆ ಇರುವುದಿಲ್ಲ.
ನಿನ್ನ ಪರಿಶ್ರವನ್ನು ಯಾರು ಹೊಗಳುವುದಿಲ್ಲ ಗಮನಕ್ಕೆ ಬರುವುದು ಫಲಿತಾಂಶ ಮಾತ್ರ.
ಅಹಂಕಾರ ವಿಲ್ಲದ ಮನುಷ್ಯ ಯಾವ ಧರ್ಮಗ್ರಂಥವನ್ನು ಓದದೆ ಯಾವ ಮಂದಿರವನ್ನು ಪ್ರವೇಶಿಸದೇ ಮೋಕ್ಷ ಪಡೆಯಬಹುದು.
Share On
17
ಜೀವನದಲ್ಲಿ ಯಾವತ್ತು ನೀವು ಮತ್ತೊಬ್ಬರ ಮೇಲೆ ಅತೀ ಹೆಚ್ಚು ನಂಬಿಕೆ ಇಡುತ್ತೀರೋ,
ಅಲ್ಲಿ ನಂಬಿಕೆಗೂ ಮೀರಿ ಮೋಸ ನಡೆಯುತ್ತದೆ ಇದುವೇ ಬದುಕು.
ಬೆಳಕಿಗೋಸ್ಕರ ಮೈಸುಟ್ಟುಕೊಂಡ ಬತ್ತಿ ಯಾರಿಗೂ ಕಾಣಿಸಲಿಲ್ಲ.
ಆ ಬೆಳಕಿಗೋಸ್ಕರ ಅಸ್ತಿತ್ವವನ್ನೇ ಕಳೆದುಕೊಂಡ ಎಣ್ಣೆ ಯಾರಿಗೂ ಕಾಣಿಸಲಿಲ್ಲ.
ಆ ಬೆಳಕಿಗೋಸ್ಕರ ಆಶ್ರಯ ಕೊಟ್ಟ ಹಣತೆ ಯಾರಿಗೂ ಕಾಣಿಸಲಿಲ್ಲ.
ಹಾಗೆಯೇ ಜೀವನ, ಕೆಲವು ಸಲ ನಮ್ಮ ಶ್ರಮ ಇನ್ನೊಬ್ಬರ ಖ್ಯಾತಿಗೆ ಕಾರಣವಾಗುತ್ತದೆ.
Share On
18
ಮನುಷ್ಯನ ನಡುವಳಿಕೆ ಹಣ ಮತ್ತು ಧರ್ಮದಿಂದ ಬದಲಾವಣೆಯಾಗುತ್ತದೆ,
ಆದರೆ ಅಂತರ ಇಷ್ಟೇ
ಬದಲಾವಣೆ ಹಣದಿಂದಾದರೆ ಗರ್ವದಿಂದ ಮತ್ತು ಧರ್ಮದಿಂದಾದರೆ ನಮ್ರತೆಯಿಂದ ನಡೆಯುತ್ತಾನೆ.
ಎಲ್ಲಿ ಸತ್ಯ ವಿದೆಯೋ ಅಲ್ಲಿ ಹಠ ಇರುತ್ತದೆ...!
ಎಲ್ಲಿ ಪ್ರಾಮಾಣಿಕತೆ ಇರುತ್ತದೆಯೋ ಅಲ್ಲಿ ಒಳ್ಳೆಯ ನಡವಳಿಕೆ ಇರುತ್ತದೆ,
ಎಲ್ಲಿ ಹೆಚ್ಚು ಪ್ರೀತಿ ಇರುತ್ತದೆಯೋ ಅಲ್ಲಿ ಕೋಪವು ಇರುತ್ತದೆ...!!
Share On
19
ತೊಲೆ ಬಂಗಾರ ಅಕ್ಕ ತಂಗಿಯರನ್ನ ದೂರ ಮಾಡುತ್ತದೆ,
ಗಜ ಸ್ಥಳ ಅಣ್ಣತಮ್ಮಂದಿರನ್ನ ದೂರ ಮಾಡುತ್ತದೆ,
ಮೂರು ಕಾಸಿನ ನೋಟು ಆರು ಅಡಿಯ ಮನುಷ್ಯನನ್ನು ಆಡಿಸುತ್ತದೆ,
ಎರಡು ಇಂಚಿನ ನಾಲಿಗೆ ಸಂಬಂಧ ಕೆಡಿಸುತ್ತದೆ.
ಸಣ್ಣದೆನ್ನುವುದು ಎಲ್ಲವೂ ಮರೆಯಲಾರದ ಪಾಠ ಕಲಿಸುತ್ತದೆ.
ಅದೃಷ್ಟದಿಂದ ಬಂದ ಸಂಪತ್ತು ಅಲಂಕಾರವನ್ನು ತರಿಸುತ್ತದೆ,
ಬುದ್ದಿವಂತಿಕೆಯಿಂದ ಸಂಪಾದಿಸಿದ ಸಂಪತ್ತು ಸಂತೋಷವನ್ನು ಕೊಡುತ್ತದೆ,
ಕಷ್ಟಪಟ್ಟು ಸಂಪಾದಿಸಿದ ಸಂಪತ್ತು ಸಂತೃಪ್ತಿ ನೀಡುತ್ತದೆ.
Share On
20
ಪ್ರೀತಿ ಸಮುದ್ರದಲ್ಲಿ ಸಿಗುವ ಉಪ್ಪಿನ ಹಾಗೆ, ಅದು ಯಾರಿಗೆ ಬೇಕಾದರೂ ಸಿಗುತ್ತದೆ
ಆದರೆ,
ಸ್ನೇಹ ಸಮುದ್ರದಲ್ಲಿ ಸಿಗುವ ಮುತ್ತಿನ ಹಾಗೆ ಅದು ಕೆಲವರಿಗೆ ಮಾತ್ರ ಸಿಗುತ್ತದೆ.
ಮನುಷ್ಯ ತಪ್ಪು ಮಾಡಿದಾಗ
ಆ ತಪ್ಪನ್ನು ತಿದ್ದಲು ಪ್ರಯತ್ನಿಸಬೇಕೇ ಹೊರತು,
ಆ ಮನುಷ್ಯನೇ
ಸರಿಯಿಲ್ಲ ಅನ್ನುವುದು ತಪ್ಪು..!!
Share On
21
ತಾಯಿ ತಂದೆ ಕಲಿಸುವ ಸಂಸ್ಕಾರ, ಗುರು ಹಿರಿಯರು ಕಲಿಸುವ ವಿಧ್ಯೆ,
ಸಮಾಜ ಕಲಿಸುವ ಬದುಕುವ ಕಲೆ,
ಎಲ್ಲವೂ ಉತ್ತಮವಾಗಿಯೇ ಇರುತ್ತದೆ.
ಇದನ್ನೆಲ್ಲ ನಾವು ಯಾವ ರೀತಿ ಸ್ವೀಕರಿಸುತ್ತೇವೆ ಎಂಬುದರ ಮೇಲೆ ನಮ್ಮ ವ್ಯಕ್ತಿತ್ವ ರೂಪಗೊಳ್ಳುತ್ತೆ....
Share On
22
ನಾಲಿಗೆಗೆ ಮಾತು ಕಲಿಯಲು ಮೂರು ವರ್ಷ ಬೇಕು,
ಆ ಮಾತನ್ನು ಎಲ್ಲಿ ಯಾವಾಗ ಆಡಬೇಕು ಎಂಬುದನ್ನು ಜೀವನ ಪೂರ್ತಿ ಕಲಿಯಬೇಕು.
ಎಲ್ಲವನ್ನು ಸಹಿಸಿಕೊಳ್ಳುವ ಶಕ್ತಿ ಇದ್ದವನು ಮಾತ್ರ ಎಲ್ಲವನ್ನೂ ಗೆಲ್ಲುವ ಸಾಮಥ್ಯ೯ವನ್ನು ಹೊಂದಿರುತ್ತಾನೆ.
Share On
23
ಜೀವನದಲ್ಲಿ ಯಾವುದಕ್ಕೂ ಅಸೆಪಡಬೇಡ.
ನಮ್ಮ ಹಣೆಬರಹದಲ್ಲಿ ಏನು ಇದೆಯೋ ಅದೇ ನಡೆಯುತ್ತದೆ.
ಜೀವನದಲ್ಲಿ ಒಂದು ದಿನವನ್ನು ಕೂಡ ವಿಷಾದಿಸಬಾರದು, ಒಳ್ಳೆಯ ದಿನಗಳು ಸಂತೋಷವನ್ನು ನೀಡಿದರೆ,
ಕೆಟ್ಟ ದಿನಗಳು ಅನುಭವದ ಪಾಠಗಳನ್ನು ಕಲಿಸುತ್ತವೆ, ಉತ್ತಮ ದಿನಗಳು ಸುಂದರ ನೆನಪುಗಳನ್ನು ನೀಡುತ್ತವೆ.
Share On
24
ನೆನಪಿರಲಿ ಎಲ್ಲಾರಿಗೂ ಎಲ್ಲ ಸಮಯದಲ್ಲೂ ನಾವೇ ಬೇಕಾಗಿಲ್ಲ,
ಹಡಗು ಎಷ್ಟೇ ಭಾರ ಆದ್ರೂ ತೇಲಲೇಬೇಕು,
ಹಾಗೆ ಮನಸ್ಸು ಎಷ್ಟೇ ಭಾರ ಆದ್ರೂ ಜೀವನ ಸಾಗಿಸಬೇಕು.
ಸತ್ಯ, ನಿಸ್ವಾರ್ಥತೆ ಮತ್ತು ಅಂತರಿಕ ಪರಿಶುದ್ಧತೆ,
ಯಾರಲ್ಲಿ ಈ ಮೂರು ಶ್ರೇಷ್ಟ ಗುಣಗಳಿರುತ್ತದೆಯೋ ಅಂತಹವರನ್ನು ಈ ಬ್ರಹ್ಮಾಂಡದ ಯಾವ ಶಕ್ತಿಯೂ ಅಲುಗಾಡಿಸಲಾರದು.”
Share On
25
“ಗಾಳಿ ಮನುಷ್ಯನ ಜೀವಕ್ಕೆ ಎಷ್ಟು ಮುಖ್ಯವೋ. ಗಾಳಿಮಾತು ಮನುಷ್ಯನಿಗೆ ಅಷ್ಟೇ ಅಪಾಯಕಾರಿ.
ಇವತ್ತು ಇದ್ದ ಸಂಪತ್ತು ನಾಳೆ ಇಲ್ಲದಿರಬಹುದು..
ಇವತ್ತು ಇಲ್ಲದೆ ಇರುವ ಸಂಪತ್ತು ನಾಳೆ ಬರಬಹುದು...
ಆದರೆ ಪ್ರೀತಿ, ವಿಶ್ವಾಸ, ನಂಬಿಕೆ, ಭರವಸೆ ಇವೆಲ್ಲವೂ ಒಮ್ಮೆ ಕಳೆದುಕೊಂಡರೆ ಮತ್ತೆ ಮರಳಿ ಸಿಗುವುದಿಲ್ಲ.
Share On
26
ಈ ಜಗತ್ತಿನಲ್ಲಿ ಯಾರೊಬ್ಬರೂ ಪರಿಪೂರ್ಣರಲ್ಲ,
ಒಂದೊಂದು ದೋಷ ಹುಡುಕುತ್ತಾ ಹೋದರೆ ಅದಕ್ಕೆ ಕೊನೆ ಎಂಬುದೇ ಇರುವುದಿಲ್ಲ,
ಮುಳ್ಳಿನ ನಡುವೆ ಗುಲಾಬಿಯಂತೆ ಮನುಷ್ಯರು ಬಾಳಿ ಬದುಕುವ ಅನಿವಾರ್ಯತೆಯಿದೆ.
ನಿನ್ನ ಜೀವಕ್ಕೆ ನೀನೇ ಬೆಲೆ ಕೊಡದೆ ಇದ್ದರೆ ನಿನಗೆ ನೀನು ಸಾವು ತಂದ ಹಾಗೆ..
Share On
27
ಜೀವನ ಕಲಿಸುವ ಪಾಠ ಇಷ್ಟೆ,
ಕೆಲವರ ಗುಣ ಏನು ಅಂತ ಗೊತ್ತಾದಾಗ,
ನಮ್ಮಲ್ಲಿ ನಾವು ಬದಲಾವಣೆ ಮಾಡಿಕೊಂಡು, ಖುಷಿಯಾರಬೇಕೇ ಹೊರತು ಅವರನ್ನು ಬದಲಾಯಿಸಲು ಹೋಗಬಹುದು ಇದರಿಂದ,
ಸುಮ್ಮನೆ ಸಮಯ ವ್ಯರ್ಥ.
Share On
28
ಪಾಪ -ಪುಣ್ಯ
ಎಂದರೆ ಬೇರೇನಲ್ಲಯಾರ ಮನಸನ್ನ ನೋಯಿಸುತ್ತಿವೋ..., ಅದು ಪಾಪ.
ಯಾರನ್ನು ಸಂತೋಷ ದಿಂದ ನೋಡಿ, ನಾವು ಸಂತಸ ಪಡುತ್ತೀವೋ... ಅದುವೇ ಪುಣ್ಯ.
ಹಣವಿದ್ದರೆ ಏನು ಬೇಕಾದರೂ ಖರೀದಿಸಬಹುದು,
ಆದರೆ ಇನ್ನೊಬ್ಬರ ಹೃದಯದಲ್ಲಿ ಜಾಗ ಖರೀದಿಸಲು ಸಾಧ್ಯವಿಲ್ಲ,
ಅದಕ್ಕೆ ಬೇಕಾಗಿರುವುದು ಹಣವಲ್ಲ ನಮ್ಮ ಉತ್ತಮವಾದ ವ್ಯಕ್ತಿತ್ವ.
Share On
29
ನನ್ನ ಬಾರವನ್ನು ನಾನೇ ಹೊರಬೇಕು,
ಅನವಶ್ಯಕ ಬಾರ ತೊರೆದು ಹಗುರವಾಗಿ ಬಹುದೂರ ಸಾಗಿ ಗುರಿ ತಲುಪಬೇಕು.
ಸಲ್ಲದ ಬಾರವ ಹೊತ್ತು ಬಾಗಿ ಬೆಂಡಾಗಿ ಗುರಿ ತಲುಪದೆ ಅತಂತ್ರ ಸ್ಥಿತಿಯಲ್ಲಿ ನಿಲ್ಲುತ್ತೇವೆ ಎನ್ನುವ ಸಾಮಾನ್ಯ ಜ್ಞಾನವನ್ನು ಮರೆಯಬಾರದು.
ಪ್ರತಿ ದಿನವೂ ನಮಗೆ ಹೊಸತನ್ನು ಆರಂಭಿಸಲು,
ಹಳೆಯ ತಪ್ಪನ್ನು ತಿದ್ದಿಕೊಳ್ಳಲು ಸಿಕ್ಕ ಅತಿ ದೊಡ್ಡ ಅವಕಾಶ.
ಈ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಬೇಕು.
ನಿನ್ನೆಯಂತೆ ಇಂದು ಎಂದು, ಎಂದೂ ಭಾವಿಸಬಾರದು.
ಹೊಸ ಹುಡುಕಾಟವನ್ನು ನಿಲ್ಲಿಸಬಾರದು.
Share On
30
ಎಲ್ಲರೂ ನಮ್ಮನ್ನು ಗುರುತಿಸಲಾರರು,
ಆದರೆ ಒಬ್ಬರಾದರೂ ನಮ್ಮನ್ನು ಖಂಡಿತಾ ಗುರುತಿಸುತ್ತಾರೆ, ಆದರೆ ನಾವು ಸರಿಯಾದ ಜಾಗದಲ್ಲಿ ನಿಂತಿರಬೇಕು.
ಕಾಮನ ಬಿಲ್ಲು ಒಂದೇ ಸಾರಿ ಏಳು ಬಣ್ಣಗಳನ್ನು ತೋರಿಸಿತ್ತದೆ,
ಆದರೆ ಮನುಷ್ಯ ಮಾತ್ರ ಸಮಯ ಅವಕಾಶ ನೋಡಿ ಒಂದೊಂದು ಬಣ್ಣವನ್ನ ಹೊರ ಚೆಲ್ಲುತ್ತಾನೆ.
Share On
31
ಜನರು ನಿಮ್ಮನ್ನು ನೇರವಾಗಿ ಸೋಲಿಸುವುದನ್ನು ಬಿಟ್ಟು ನಿಮ್ಮ ವಿರುದ್ಧ ಪಿತೂರಿ ಮಾಡುತ್ತಿದ್ದಾರೆ ಎಂದರೆ,
ಅರ್ಥ ಮಾಡಿಕೊಳ್ಳಿ ನಿಮ್ಮ ಸಾಮರ್ಥ್ಯ ಅತ್ಯುತ್ತಮ ಗುಣಮಟ್ಟದಲ್ಲಿದೆ ಇದೆ ಎಂದು.
ಸಣ್ಣ ವಯಸ್ಸಿನವರ ಜೊತೆ ಸ್ನೇಹ ಮಾಡಿ ಅನೇಕ ಗೊತ್ತಿಲ್ಲದ ವಿಚಾರಗಳು ತಿಳಿಯುತ್ತವೆ,
ಆದರೆ ಸಣ್ಣ ಮನಸ್ಸಿನವರ ಜೊತೆ ಸ್ನೇಹ ಮಾಡಿ ಅನೇಕ ವಿಚಾರಗಳನ್ನೇ ಬುಡಮೇಲು ಮಾಡುತ್ತಾರೆ.....
Share On
32
ಸಂತಸ ಅಥವಾ ನೆಮ್ಮದಿ ಎನ್ನುವುದನ್ನು ಅರಸಿಕೊಂಡು ಹೋದರೆ ಸಿಗುವುದಿಲ್ಲ.
ಅವು ನಮ್ಮೊಳಗೇ ಇರುವಂಥದ್ದು.
ಅನೇಕ ಮಂದಿ ಅವನ್ನು ಹುಡುಕುವುದನ್ನೇ ಕಾಯಕ ಮಾಡಿಕೊಂಡಿರುತ್ತಾರೆ.
ಇನ್ನು ಕೆಲವರು ದುಬಾರಿ ವಸ್ತುವಿನಲ್ಲಿ ಅವು ಇರಬಹುದು ಎಂದು ಭಾವಿಸುತಾರೆ.
Share On
33
ತಮ್ಮ ಜವಾಬ್ದಾರಿಗಳನ್ನು ಅರಿತುಕೊಂಡು ಕಾರ್ಯೋನ್ಮುಖರಾಗುವುವರು ಯಶಸ್ಸಿನ ಹಾದಿಯಲ್ಲಿ ಸಾಗುತ್ತಾರೆ,
ಜವಾಬ್ದಾರಿಗಳನ್ನೇ ಸಮಸ್ಯೆಗಳೆಂದು ಭಾವಿಸುವುವರು ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯವಿಲ್ಲ.
Share On
34
ಬಂಗಾರವನ್ನು ಕುಲುಮೆಯಲ್ಲಿಟ್ಟರೆ ಅದು ತನ್ನ ಕಲ್ಮಶವನ್ನು ಕಳೆದುಕೊಂಡು ಮತ್ತಷ್ಟು ಪ್ರಕಾಶಮಾನವಾಗಿ ಹೊಳೆಯುತ್ತದೆ.
ನೀವು ಕಷ್ಟದಲ್ಲಿ ಸಿಲುಕಿದರೆ ನಿಮ್ಮಲ್ಲಿರುವ ಸಾಮರ್ಥ್ಯ ಹೊರಬಂದು ನೀವು ಮತ್ತಷ್ಟು ಪ್ರಕಾಶಿಸಲು ಅನುವು ಮಾಡಿಕೊಟ್ಟಂತಾಗುತ್ತದೆ. ಕಷ್ಟಗಳು ನಮ್ಮನ್ನು ಗಟ್ಟಿ ಮಾಡಲು ಬರುತ್ತವೆ ಎಂದು ಭಾವಿಸಿ.
ನಿನ್ನನ್ನು ಹೊರತುಪಡಿಸಿ ಯಾರೂ ನಿಮಗೆ ಶಾಂತಿಯನ್ನು ತರಲು ಸಾಧ್ಯವಿಲ್ಲ.
Share On
35
ಸಮಯ ಬರುವವರೆಗೂ ಮಾತ್ರ ಸುಳ್ಳು ಪ್ರಭಲವಾಗಿರುತ್ತದೆ.
ಸಮಯ ಬಂದಮೇಲೆ ಸತ್ಯದ ಪ್ರಭಾವಕ್ಕೆ ಸುಳ್ಳು ಸುಟ್ಟು ಹೋಗುತ್ತದೆ.
ಮೊಸರಿಗಿಂತ ಮೊಸರಲ್ಲಿ ಅಡಗಿರುವ ತುಪ್ಪಕ್ಕೆ ಬೆಲೆ ಜಾಸ್ತಿ....
ಅದೇ ರೀತಿ ಮನುಷ್ಯನಿಗಿಂತ ಅವರಲ್ಲಿ ಅಡಗಿರುವ ಒಳ್ಳೆತನಕ್ಕೆ ಬೆಲೆ ಜಾಸ್ತಿ.
Share On
36
ನಿನಗೆ ಎಲ್ಲಿ ಸಮಾಧಾನ ತೃಪ್ತಿ ಸಿಗುತ್ತದೆಯೋ ಅಲ್ಲಿ ಜೀವಿಸು ಅದೇ ಸ್ವರ್ಗ.
ದುಡ್ಡು ಇದ್ದ ಮಾತ್ರಕ್ಕೆ ದೊಡ್ಡ ಮನುಷ್ಯ ಆಗಲ್ಲ,
ಆ ದುಡ್ಡಿನಿಂದ ಸಹಾಯ ಮಾಡುವ ಗುಣ ಇದ್ದರೆ ಮಾತ್ರ ದೊಡ್ಡ ಮನುಷ್ಯ ಆಗುತ್ತಾರೆ.
Share On
37
ಆಸೆಗಳು ಲೋಹದ ನಾಣ್ಯಗಳಿದ್ದಂತೆ. ಅವುಗಳ ಸಂಖ್ಯೆ ಹೆಚ್ಚುತ್ತ ಹೋದಂತೆ ಕಿಸೆಯಲ್ಲಿ ಭಾರ ಹೆಚ್ಚಾಗಿ ಮನುಷ್ಯ ಅದನ್ನು ಹೊರಲಾರದ ಸ್ಥಿತಿ ತಲುಪುತ್ತಾನೆ.
ಬಲ ಇದೆ ಎಂದು ಅಹಂಕಾರ ಬೇಡ ಏಕೆಂದರೆ ಕಲ್ಲು ನೀರಿನಲ್ಲಿ ಬಿದ್ದಾಗ ಅದು ಅದರ ಭಾರದಿಂದಲೇ ಮುಳ್ಳುಗುತ್ತೆ ಇದನ್ನ ಗಮನದಲ್ಲಿ ಇಟ್ಟುಕೊಳ್ಳಬೇಕು,
ಸಂಬಂಧ ಯಾವುದೇ ಇರಲಿ ನಮಗೆ ಬೆಲೆ ಇಲ್ಲ ಅಂದಮೇಲೆ ಅದರಿಂದ ದೂರ ಇರೋದೇ ಒಳ್ಳೆಯದು.
Share On
38
ಆಸೆ ಪಟ್ಟು ನಿರಾಸೆ ಅಗೋದಕ್ಕಿಂತ ಆಸೆ ಪಡದೆ ಮೌನವಾಗಿರುವುದು ಒಳಿತಲ್ಲವೇ.
ಸುಂದರವಾದ ದೇಹ ಒಂದು
ನಿರ್ದಿಷ್ಟವಾದ ವಯಸ್ಸಿನವರೆಗೆ ಮಾತ್ರ
ಇರುತ್ತದೆ ಆದರೆ ಸುಂದರವಾದ
ಮನಸ್ಸು ಸಾಯುವವರೆಗೆ ಜೊತೆಗಿರುತ್ತದೆ.
Share On
39
ಮನಸ್ಸನ್ನು ಗಾಜಿನಂತೆ ಇಟ್ಟುಕೊಳ್ಳಬೇಡಿ ಸಣ್ಣ ಪೆಟ್ಟುಬಿದ್ದರು ಒಡೆದು ಹೋಗುತ್ತೆ,
ಕಚ್ಚಾಜೇಡಿ ಮಣ್ಣಿನoತಿದ್ದಾರೆ ಒಂದೊಂದು ಹೊಡೆತಕ್ಕೂ ಒಂದೊಂದು ಆಕಾರ ಪಡೆಯುತ್ತದೆ.
ಪ್ರಯತ್ನ ಹಣೆಬರಹಕ್ಕಿಂತ ದೊಡ್ಡದು. ಪ್ರಯತ್ನ ಎಂಬ ಪದ ಚಿಕ್ಕದಿರಬಹುದು,
ಆದರೆ ಅದರ ಫಲಿತಾಂಶ ಅಮೋಘ ಮತ್ತು ಅಪಾರ.
Share On
40
ಅವಮಾನಗಳು ಬದುಕಲೇಬೇಕೆಂಬ
ಧೈರ್ಯ ಕೊಟ್ಟರೆ,
ಅನುಭವಗಳು ಹೇಗೆ ಬದುಕಬೇಕೆಂಬ
ಮಾರ್ಗ ತೋರಿಸುತ್ತದೆ..!!
ಅನ್ಯರ ಬುದ್ಧಿವಾದಕ್ಕೆ ಕಿವಿಗೊಡುವ ಸದ್ದುದ್ಧಿ ನಮಗಿದ್ದರೆ. ನಮ್ಮ ಜೀವನದಲ್ಲಿ ಎಷ್ಟೋ ಅನಾಹುತಗಳನ್ನು ನಾವು ತಪ್ಪಿಸಬಹುದು.
Share On
41
ಸಂತೋಷ ಮತ್ತು ನಂಬಿಕೆ ಎನ್ನುವುದು ಮಾರಾಟಕ್ಕೆ ದೊರಕುವುದ್ದಿಲ್ಲ.
ಸಂತೋಷವನ್ನು ಮನುಷ್ಯರ ಬಳಿ ಹಂಚಿಕೊಳ್ಳಬೇಕು, ನಂಬಿಕೆಯನ್ನು ಮನಸ್ಸಿನಿಂದ ಹಂಚಿಕೊಳ್ಳಬೇಕು.
ಆರೋಗ್ಯವು ಔಷಧದಿಂದ ಬರುವುದಿಲ್ಲ.
ಶಾಂತ ಮನಸ್ಸಿನಿಂದ ಮತ್ತು ಒಳ್ಳೆಯ ಆಲೋಚನೆಗಳಿಂದ ಮಾತ್ರ ಬರುತ್ತದೆ...
Share On
42
ಯಾರ ಮನಸ್ಸಿನಲ್ಲಿ ನಾನೇ
ಸರಿ ಎನ್ನುವುದು ಇರುತ್ತದೋ
ಅವರಿಗೆ ತಮ್ಮ ತಪ್ಪಿನ ಅರಿವಾಗುವುದಿಲ್ಲ.
ಯಾರು ತಮ್ಮ ಮುಖದಲ್ಲಿ ನಗು ಮತ್ತು ಮೌನವನ್ನು ಶಾಶ್ವತವಾಗಿ ಉಳಿಸಿಕೊಂಡಿರುತ್ತಾರೋ ಅವರು ಎಲ್ಲಾ ಸಮಸ್ಯೆಗಳನ್ನು ಎದುರಿಸುವ ಸಾಮರ್ಥ್ಯ ಹೊಂದಿರುತ್ತಾರೆ.
ಸತ್ಯವನ್ನು ತಿಳಿಯುವುದು ಜ್ಞಾನ ಮಾರ್ಗ, ಸತ್ಯವನ್ನು ನಂಬುವುದು ಭಕ್ತಿಮಾರ್ಗ, ಸತ್ಯಪಥದಲ್ಲಿ ನಡೆಯುವುದು ಮುಕ್ತಿಮಾರ್ಗ.
Share On
43
ನಾವು ಕಂಡ ಕನಸುಗಳು ನಿಜಾವಾಗದೆ ಇರಬಾರದು,
ಆದರೆ ನಾವು ಪಟ್ಟ ನೋವು ಎಂದಿಗೂ ಸುಳ್ಳಾಗಲಾರದು.
ನಮ್ಮನ್ನು ದ್ವೇಷಿಸುವವರ ಬಗ್ಗೆ ಚಿಂತಿಸುತ್ತ ಕೂರುವಷ್ಟು ಬದುಕು ಸುದೀರ್ಘವಿಲ್ಲ,
ಹಾಗಾಗಿ ನಮ್ಮನ್ನು ಇಷ್ಟ ಪಡುವವರು ಜತೆ ಸಮಯ ಕಳೆಯುತ್ತ ನಿರಾಳವರೋಣ....
Share On
44
ಯಾರೋ ಒಂದು ಸುಳ್ಳನ್ನು ನಿಜ ಎಂದು ನಿರೂಪಿಸಲು ಸಾವಿರ ಸುಳ್ಳನ್ನು ಹೇಳಬೇಕಾಗುತ್ತದೆ.
ಅದಕ್ಕಿಂತ ಒಂದು ನಿಜಾನೇ ಹೇಳಿ ಕ್ಷಮಿಸಿ ಅಂತ ಕೇಳುವುದು ಎಷ್ಟೊ ಒಳಿತು.
ಒಮ್ಮೆ ವಿಶ್ವಾಸ ಕಳೆದುಕೊಂಡರೆ ಅದನ್ನು ಮರಳಿ ಪಡೆಯಲು ಸಾಧ್ಯವಿಲ್ಲ,
ಕರಗುವ ಚಾಕಲೇಟ್ ತರ ಅದನ್ನು ಎಷ್ಟೇ ಪ್ರಯತ್ನ ಪಟ್ಟರು ಮರಳಿ ಅದರ ಗಾತ್ರ ಆಕಾರ ರುಚಿಯನ್ನು ಮೊದಲಿನಂತೆ ಮಾಡಲು ಸಾಧ್ಯವೇ ಇಲ್ಲ!!
ತನಗೂ ಒಂದು ದಿನ ಸಾವಿದೆ ಎಂದು ಅರಿತವನು ಇನ್ನೊಬ್ಬರಿಗೆ ಎಂದೂ ತೊಂದರೆ ಕೊಡುವುದಿಲ್ಲ.
Share On
45
ಜೀವನದಲ್ಲಿ ತಪ್ಪು ಹೆಜ್ಜೆ ಇಡುವುದು ಸಹಜ...
ಆದರೆ ಬೇಗ ಎಚ್ಚೆತ್ತುಕೊಳ್ಳುವುದು ಬುದ್ಧಿವಂತಿಕೆ.....
ತಪ್ಪು ಆದಾಗ ಕೊರಗುವುದಕ್ಕಿಂತ
ಮುಂದೆ ತಪ್ಪು ಆಗದಂತೆ ನಡೆದುಕೊಳ್ಳುವುದು ಉತ್ತಮ.
Share On
46
ಬಡತನ ಮನುಷ್ಯನಿಗೆ ಇರಬೇಕು,
ಮನಸ್ಸಿಗೆ ಇರಬಾರದು.
ಸಿರಿತನ ಮನಸ್ಸಿಗೆ ಇರಬೇಕು,
ಮನುಷ್ಯನಿಗೆ ಇರಬಾರದು.
Share On
47
ಯಾರೂ ಶ್ರೇಷ್ಠರು ಅಲ್ಲ ಕನಿಷ್ಠರೂ ಅಲ್ಲ,
ಪ್ರತಿಯೊಬ್ಬರಿಗೂ ಅವರದ್ದೇ ಆದ ವೈಶಿಷ್ಟ್ಯಗಳಿರುತ್ತವೆ.
ಯಾರನ್ನೂ ಯಾರಿಗೂ ಹೋಲಿಸದೇ ಎಲ್ಲರನ್ನು ಗೌರವಿಸೋಣ.
ಯಶಸ್ಸು ಯಾವತ್ತೂ ನಮ್ಮನ್ನು ಹುಡುಕಿಕೊಂಡು ಬಂದು ಕಿರೀಟ ತೊಡಿಸುವುದಿಲ್ಲ,
ನಾವೇ ಅದನ್ನು ಬೆನ್ನಟ್ಟಿ ಹೋಗಬೇಕು.
Share On
48
ಹೊಗಳದಿದ್ದರೂ ಬೇಡ,
ತೆಗಳದಿದ್ದರೆ ಸಾಕು.
ಸಾಧಿಸದಿದ್ದರೂ ಬೇಡ,
ಬಾಧಿಸದಿದ್ದರೆ ಸಾಕು.
ಪರರ ಸರಿ ತಪ್ಪು ಬೇಡ,
ನಿನ್ನ ಆತ್ಮಕ್ಕೆ ನೀ ಸರಿಯೆನಿಸಿದರೆ ಸಾಕು.
ಎದುರಾಳಿಯನ್ನು ಮಾತಿನಲ್ಲಿ ಬಾಯಿ ಮೇಲೂ ಮಾಡಿ,
ಗೆಲ್ಲುವುದಕ್ಕಿಂತ ಮೌನದಲ್ಲಿ ಸುಮ್ಮನೆ ಇದ್ದು ಗೆಲ್ಲುವುದು ಉತ್ತಮ.
ಮಾತು ಸಾವಿರ ಸಮಸ್ಯೆ ಉಂಟು ಮಾಡಿದರೆ,
ಮೌನ ಸಾವಿರ ಉತ್ತರ ಹುಡುಕಿ ಕೊಡುತ್ತದೆ....
Share On
49
ಗುರಿ ಗುಪ್ತವಾಗಿರಲಿ, ಸಾಧನೆ ಸತತವಾಗಿರಲಿ,
ವಿಶ್ವವನ್ನೇ ಮರೆತರು ವಿಶ್ವಾಸ ಮರೆಯದಿರಿ.
"ವಾದ್ಯ" ತಲೆ ತೂಗುವಂತೆ ಮಾಡುತ್ತದೆ ಆದರೆ
"ವಾದ" ತಲೆ ತಿರುಗುವಂತೆ ಮಾಡುತ್ತದೆ.
Share On
50
ಎಲ್ಲರನ್ನೂ ಖುಷಿಯಾಗಿಸುವುದು
ಯಾರಿಂದಲೂ ಸಾಧ್ಯವಿಲ್ಲ..
ಆದರೆ ಎಲ್ಲರೊಂದಿಗೆ ಖುಷಿಯಾಗಿ ಇರಲು ಎಲ್ಲರಿಗೂ ಸಾಧ್ಯ..
ಕೆಲವೊಮ್ಮೆ ಎಲ್ಲಾ ತಿಳಿದಿದ್ದರೂ ಕೂಡ ಮೌನವಾಗಿ ಇರಬೇಕಾಗುತ್ತದೆ,
ಏಕೆಂದರೆ,
ಸಮಯ ನಿನ್ನ ವಿರುದ್ಧವಾಗಿರುತ್ತದೆ,
ನಿನ್ನ ಸಮಯ ಬರುವವರೆಗೂ ಕಾಯಲೇಬೇಕು.
Share On
51
ಭಾಷೆ ಅರ್ಥವಾಗದವರ ಜೊತೆ
ಹೇಗೋ ಬದುಕಿ ಬಿಡಬಹುದು.
ಭಾವನೆ ಅರ್ಥಮಾಡಿಕೊಳ್ಳದವತ
ಜೊತೆ ಬದುಕುವುದು ದುಸ್ತರ.
ಬದುಕಿಗೆ ರಾಜೀನಾಮೆ ಎಂದಿಗೂ ಇಲ್ಲ,
ಇರುವದು ರಾಜಿ ಎಂಬುದು ಮಾತ್ರ.
Share On
52
ಅತಿಯಾಗಿ ಮಾತನಾಡಿದರೆ ವಿವಾದ..
ಅನಾವಶ್ಯಕವಾಗಿ ಮಾತನಾಡಿದರೆ ಅವಮಾನ..
ಅವಶ್ಯಕತೆ ಇದ್ದಷ್ಟೇ ಮಾತನಾಡಿದರೆ ಗೌರವ.
ಎಲ್ಲರೂ ಬಹಳ ಪ್ರೀತಿಯ ಮಾತನ್ನಾಡುತ್ತಾರೆ,
ಅದರೆ ಪ್ರಪಂಚ ನಡೆಯುವುದು ಕೇವಲ ಅವಶ್ಯಕತೆಗಳ ಆಧಾರದ ಮೇಲೆ ಮಾತ್ರ.
Share On
53
ಬಿಟ್ಟು ಹೋದವರು ಮತ್ತೆ ಬಂದರೆಂದು ಖುಷಿಪಡದಿರಿ
ಯಾಕೆಂದರೆ ……
ಒಂದು ಬಾರಿ ಓದಿದ ಪುಸ್ತಕದ ಅಂತ್ಯ ಹೇಗಿದೆ ಎಂದು
ನಮಗೆ ಅರಿತಿರುವಾಗ ಆ ಪುಸ್ತಕವನ್ನು ಎಷ್ಟೇ ಬಾರಿ ಓದಿದರೂ ಅದರ ಅಂತ್ಯ ಒಂದೇ ಆಗಿರುತ್ತದೆ…!
.....ತಪ್ಪುಗಳನ್ನು ಕ್ಷಮಿಸ ಬಹುದು, ಆದರೆ ಮೋಸವನ್ನಲ್ಲ.....
Share On
54
ಅದೃಷ್ಟ ನಮ್ಮ ಕೈಯಲ್ಲಿ ಇರುವುದಿಲ್ಲ ಕೇವಲ ತೀರ್ಮಾನ ನಮ್ಮ ಕೈಯಲ್ಲಿ ಇರುತ್ತದೆ.
ನಾವು ತೆಗೆದುಕೊಳ್ಳುವ ತೀರ್ಮಾನವೇ ನಮ್ಮ ಅದೃಷ್ಟವನ್ನು ತೀರ್ಮಾನಿಸುತ್ತದೆ.
ಬೆಲೆಯಿಲ್ಲದ ಜಾಗದಲ್ಲಿ ನೆಲೆ ಕಾಣಬೇಡಿ,
ಪ್ರೀತಿ ಇಲ್ಲದ ಜಾಗದಲ್ಲಿ ಆಶ್ರಯ ಕೇಳಬೇಡಿ.
Share On
55
ಜೀವನವೂ ಬರಿ ಕಷ್ಟ ನೋವುಗಳಿಂದ ಕೂಡಿದೆ ಎಂದು ಕುಗ್ಗದಿರಿ,
ಒಂದಲ್ಲ ಒಂದು ದಿನ ನಮ್ಮ ಜೀವನದಲ್ಲೂ ಕೂಡ ಸಂತೋಷ ದಿನಗಳು ಬರಲಿದೆ ಎಂಬ ವಿಶ್ವಾಸದೊಂದಿಗೆ ಬದುಕಬೇಕು.
ನಮ್ಮ ಕಷ್ಟದ ಸಮಯದಲ್ಲಿ ಸ್ಪೊರ್ತಿ ತುಂಬುವ ಒಂದು ಜೀವ ನಮ್ಮೊಂದಿಗಿದ್ದರೆ ಅಸಾದ್ಯವೂ ಸಾದ್ಯವಾಗುತ್ತದೆ....
Share On
56
ನೀವು ಯೋಚಿಸದೆ ಹೇಳುವ ಮಾತು,
ನಿಮ್ಮನ್ನು ಒಂದೊಂದು ನಿಮಿಷ ಯೋಚಿಸುವಂತೆ ಮಾಡುತ್ತದೆ.
ಆದ್ದರಿಂದ ಯೋಚಿಸಿ ಮಾತನಾಡಿ.
ತಾಳ್ಮೆ ಎನ್ನುವುದು ಬಲಹೀನತೆಯಲ್ಲ,
ಅದೊಂದು ಶಕ್ತಿ,
ಅದು ಎಲ್ಲರ ಬಳಿ ಇರುವುದಿಲ್ಲ”
Share On
57
ಪ್ರತಿಯೊಂದು ಕತ್ತಲೆ ಮನೆಗೂ ಬೆಳಕಿನ ದಾರಿಗಾಗಿ ಒಂದು ಕಿಟಕಿ ಇರುತ್ತದೆ...
ಅದೇ ರೀತಿ ನಮ್ಮ ಕಷ್ಟದ ಜೀವನದಲ್ಲೂ ಸುಖದ ದಾರಿಗಾಗಿ ಒಂದು ದಾರಿ ಇದ್ದೇ ಇರುತ್ತದೆ.
ಪ್ರಪಂಚವು ಬಹಳಷ್ಟು ವಿಶಾಲವಾಗಿದೆ ಒತ್ತಾಯವಾಗಿ ಯಾರ ಜೊತೆಗೂ ಬದುಕುವ ಪ್ರಯತ್ನ ಮಾಡಬೇಡಿ,
ಏಕೆಂದರೆ ನಿಮ್ಮನ್ನು ಗೌರವಿಸುವವರು ನಿಮ್ಮನ್ನೇ ಹುಡುಕಿಕೊಂಡು ಬರುತ್ತಾರೆ,
ಅವರಿಗೆಂದೂ ಮೋಸ ಮಾಡದಿರಿ, ಸ್ನೇಹ, ಪ್ರೀತಿ ಕಳೆದುಕೊಳ್ಳದಿರಿ.
Share On
58
ನೆಮ್ಮದಿಯಾಗಿ ಇರಬೇಕೆಂದರೆ ನಾವು ಇನ್ನೊಬ್ಬರ ವಿಷಯಕ್ಕೆ ಕಿವಿಕೊಡದೆ,
ಮತ್ತೊಬ್ಬರು ನಮ್ಮ ಬಗ್ಗೆ ಏನೇ ಮಾತಾಡಿದರೂ ತಲೆ ಕೆಡಿಸಿಕೊಳ್ಳಬೇಡಿ.
ಸಮಾಜದಲ್ಲಿ ಒಬ್ಬ ಬಡವ ನೂರು ಸತ್ಯ ಹೇಳಿದರೂ ಯಾರು ನಂಬಲ್ಲ.....
ಆದರೆ ಅದೇ ಒಬ್ಬ ಶ್ರೀಮಂತ ಒಂದು ಸುಳ್ಳು ಹೇಳಿದರೆ ಸಾಕು ಎಲ್ಲರೂ ನಂಬುತ್ತಾರೆ....
ಹಣಕ್ಕೆ ಇರುವ ಬೆಲೆ.. ಬಡವನ ಗುಣಕ್ಕೆ ಇಲ್ಲಾ...
Share On
59
ವಿದ್ಯೆ ಇದ್ದರೇನಂತೆ ವಿವೇಕ ಇಲ್ಲದಿದ್ದರೆ,
ಹಣ ಇದ್ದರೇನಂತೆ ಗುಣ ಇಲ್ಲದಿದ್ದರೆ,
ಪ್ರಾಣ ಇದ್ದರೇನಂತೆ ತ್ರಾಣ ಇಲ್ಲದಿದ್ದರೆ,
ಗುರು ಇದ್ದರೇನಂತೆ ಅರಿವೇ ಇಲ್ಲದಿದ್ದರೆ,
ರೂಪ ಇದ್ದರೇನಂತೆ ಮಾನ ಇಲ್ಲದಿದ್ದರೆ,
ಸುಖ ಇದ್ದರೇನಂತೆ ಶಾಂತಿ ಇಲ್ಲದಿದ್ದರೆ,
ಏನಿದ್ದರೇನಂತೆ ಮಾನವೀಯತೆ ಇಲ್ಲದಿದ್ದರೆ.
Share On
60
ಮೋಸ ಮಾಡಿ ಸಂಪಾದನೆ ಮಾಡಿದ ಹಣದಲ್ಲಿ,
ಸ್ವಲ್ಪ ಹಣ ಪುಣ್ಯದ ಕಾರ್ಯಕೆ ವಿನಿಯೋಗ ಮಾಡಿದಲ್ಲಿ,
ಆ ಪುಣ್ಯದ ಫಲ ಮೋಸ ಹೋದವರಿಗೆ ಸೇರುತದೆ....
ಹೊರುತು ಮೋಸ ಮಾಡಿದವರಿಗಲ್ಲ.
....ಮೋಸ ಮಾಡಿದವರಿಗೆ ಪಾಪದ ಫಲ ಕಟ್ಟಿಟ್ಟ ಬುತ್ತಿ....
Share On
61
ಒಂದು ಸಣ್ಣ ಮಾತು ಮನಸ್ಸನ್ನು ಗಾಯಗೊಳಿಸುತ್ತೆ.
ಒಂದು ಸಣ್ಣ ಸುಳ್ಳು ಸ್ನೇಹವನ್ನೇ ದೂರ ಮಾಡುತ್ತೆ.
ಒಂದು ಸಣ್ಣ ಅವಮಾನ ಸಂಬಂಧಗಳನ್ನೇ ದೂರ ಮಾಡುತ್ತೆ, ಕಾರಣ ಸಣ್ಣದ್ದೇ ಇರಬಹುದು ಪರಿಣಾಮ ದೊಡ್ಡದಾಗಿರುತ್ತೆ.
Share On
62
ಜೀವನದಲ್ಲಿ ಬರುವುದೆಲ್ಲವ ಸ್ವೀಕರಿಸಬೇಕು,
ಬಂದದ್ದೆಲ್ಲವ ಅನುಭವಿಸ*ಬೇಕು,
ನಮ್ಮ ಪಾಲಿನದಷ್ಟೇ ನಮಗೆ ಸಿಗುವುದು,
ನಮ್ಮದಲ್ಲದ್ದು ನಮ್ಮಿಂದ ಖಂಡಿತಾ ದೂರಾಗುವುದು,
ಇರುವಷ್ಟು ದಿನ ನೆಮ್ಮದಿಯಾಗಿರಬೇಕು.
ಇಷ್ಟೇ ಜೀವನ.
Share On
63
ಅನುಮಾನ ಮತ್ತು ಅಹಂಕಾರ
ಇವೆರಡೂ ಭಯಂಕರವಾದ ಮಾನಸಿಕ ರೋಗಗಳು.
ಈ ರೋಗ ಬಂದವರು ತಾವು ಸಂತೋಷವಾಗಿರುವುದಿಲ್ಲ,
ಮತ್ತು ಇತರರನ್ನು ಸಂತೋಷದಿಂದ ಇರಲು ಬಿಡುವುದಿಲ್ಲ.
Share On
64
ಜೀವನದಲ್ಲಿ ಯಾರು ಯಾರಿಗೂ ಅನಿವಾರ್ಯವಲ್ಲ ಸ್ವಲ್ಪ ಜನ ನಮ್ಮನ್ನು ಇಷ್ಟಪಡುತ್ತಾರೆ.
ಇನ್ನು ಸ್ವಲ್ಪ ಜನ ಇಷ್ಟ ಪಟ್ಟಂತೆ ನಟಿಸುತ್ತಾರೆ.
ಇನ್ನು ಕೆಲವರು ಅವರ ಅವಶ್ಯಕತೆಗೆ ನಮ್ಮನ್ನು ಬಳಸಿಕೊಳ್ಳುತ್ತಾರೆ.
“ಭವಿಷ್ಯವನ್ನು ರೂಪಿಸುವುದು ಭರವಸೆಗಳೇ ಹೊರತು ಭಯಗಳಲ್ಲ,
ಭಯ ಕೇವಲ ಭ್ರಮೆಯಷ್ಟೇ.”
Share On
65
ಗಿಡದಲ್ಲಿ ಎಷ್ಟೇ ಮುಳ್ಳುಗಳು ಇದ್ದರೂ ಅದರಲ್ಲಿ ಹೂ ಅರಳಬೇಕು,
ಹಾಗೆಯೇ ಮನಸ್ಸಿನಲ್ಲಿ ಎಷ್ಟೇ ನೋವಿದ್ದರೂ ಮುಖದಲ್ಲಿ ನಗು ತುಂಬಿರಬೇಕು.
“ಕಾರಿನಲ್ಲಿ ಓಡಾಡಿದರೆ ಪ್ರಪಂಚ ನಿನ್ನ ನೋಡಬಹುದು....
ಕಾಲ್ನಡಿಗೆಯಲ್ಲಿ ಓಡಾಡಿ ನೋಡು ಪ್ರಪಂಚವನ್ನೇ ನೀ ನೋಡಬಹುದು”
Share On
66
ಜ್ಞಾನವೆಂಬ ಸಂಪತ್ತು,
ತಾಳ್ಮೆಯೆಂಬ ಆಯುಧ,
ಜೊತೆಗೆ ನಗುವಿನಂಥ ಶಕ್ತಿವರ್ಧಕ ಹೊಂದಿದವರನ್ನು
ಯಶಸ್ಸು ಎಲ್ಲಾ ದಿಕ್ಕುಗಳಿಂದ ಬಂದು ಸೇರುತ್ತದೆ.
“ನೋಯಿಸಿ ಪಡೆಯುವ ಖುಷಿ ನರಕಕ್ಕೆ ಸಮಾನ,
ನೋವಿನಲ್ಲಿ ನಗಿಸಿ ಪಡೆಯುವ ಖುಷಿ ಸ್ವರ್ಗಕ್ಕೆ ಸಮಾನ”
Share On
67
ಕನಸು ನೂರಾರು ಇದ್ದರೇನು?
ಮನಸು ಒಂದೇ ಇರಲಿ,
ಯೋಚನೆ ಸಾವಿರ ಇದ್ದರೇನು?
ಗುರಿ ಒಂದೇ ಇರಲಿ,
ಸುಖ ದುಃಖ ಏನೇ ಇರಲಿ!
ಮುಖದಲ್ಲಿ ಸದಾ ನಗು ತುಂಬಿರಲಿ.
ನಮಗೆ ಎರಡು ರೀತಿಯ ಶಿಕ್ಷಣ ಬೇಕು,
ಮೊದಲನೆಯದು- ಜೀವನವನ್ನು ಹೇಗೆ ಮಾಡಬೇಕೆಂದು ಕಲಿಸುವುದು,
ಎರಡನೆಯದು- ಹೇಗೆ ಬದುಕಬೇಕೆಂದು ಕಲಿಸುವುದು.
Share On
68
ಸಂಸ್ಕಾರ ಇಲ್ಲದವನ ನಮಸ್ಕಾರದಲ್ಲಿ,
ಯಾವ ಪುರಸ್ಕಾರವು ದೊರೆಯುವುದಿಲ್ಲ.
ತಾಯಿ ಮತ್ತು ಹೆಂಡತಿಯನ್ನು ಅಳತೆ ಮೀರಿ ಪ್ರೀತಿಸಿ ಗೌರವಿಸಿ,
ಏಕೆಂದರೆ ಒಬ್ಬರು ಪ್ರಪಂಚಕ್ಕೆ ಕರೆ ತಂದವರು,
ಇನ್ನೊಬ್ಬರು ಈ ಪ್ರಪಂಚವನ್ನೇ ಮರೆತು ನಿಮ್ಮನ್ನು ನಂಬಿ ಬಂದವರು.
ಹೆಣ್ಣನ್ನು ರಕ್ಷಿಸಿ, ಹೆಣ್ಣನ್ನು ಗೌರವಿಸಿ...
Share On
69
ಉತ್ತಮ ಸ್ನೇಹಿತರು ಕನ್ನಡಿ ಮತ್ತು ನೆರಳು ಇದ್ದಂತೆ,
ಕನ್ನಡಿ ಎಂದೂ ಸುಳ್ಳು ಹೇಳಲ್ಲ,
ನೆರಳು ಎಂದಿಗೂ ಬಿಟ್ಟು ಹೋಗಲ್ಲ.
ಬಿಟ್ಟುಕೊಡಬೇಡ ಒಳ್ಳೆಯ ಸ್ನೇಹಿತರನ್ನು ,
ಮರಯಬೇಡ ನಿನ್ನ ಜೊತೆ ನಿಲ್ಲುವರನ್ನು ,
ತುಳಿಯಬೇಡ ಯರೊಬ್ಬರ ಬದುಕನ್ನು,
ಕಳೆದುಕೊಳ್ಳಬೇಡ ನಿನ್ನ ವ್ಯಕ್ತಿತ್ವವನ್ನು.
Share On
70
ಮನಸ್ಸಿನಲ್ಲಿ ಕೆಟ್ಟ ಆಲೋಚನೆ ತುಂಬಿದ್ದಾಗ,
ಒಳ್ಳೆಯದನ್ನು ಹೇಳುವವರು ಶತ್ರುಗಳಾಗಿ,
ಕೆಟ್ಟದ್ದನ್ನು ಹೇಳುವವರು ಹಿತ್ತೈಷಿಗಳಾಗಿ ಕಾಣುತ್ತಾರೆ.
Share On
71
ಸುಳ್ಳು ಹೇಳುವವನು ಸಾವಿರ ಹೇಳುತ್ತಾನೆ
ಏಕೆಂದರೆ ಅವನ ಹತ್ತಿರ ಸಾವಿರ ಕಥೆಗಳು ಇರುತ್ತವೆ.
ನಿಜ ಹೇಳುವವನು ಒಂದೇ ವಿಷಯವನ್ನು ಪದೇ ಪದೇ ಹೇಳುತ್ತಾನೆ.
ಏಕೆಂದರೆ ನಿಜ ಎನ್ನುವುದು ಒಂದು.
Share On
72
ಕಣ್ಣು ನಕ್ಕರೂ ಒದ್ದೆಯಾಗುತ್ತೆ,
ಅತ್ತರೂ ಒದ್ದೆಯಾಗುತ್ತೆ,
ಆದರೆ ನಗಸಿದವರು ನಾಲ್ಕು ದಿನ ನೆನಪಿನಲ್ಲಿರುತ್ತಾರೆ.
ನೋಯಿಸಿದವರೂ ಜೀವನಪೂರ್ತಿ ನೆನಪಿನಲ್ಲಿರುತ್ತಾರ...
Share On
73
ಯಾರನ್ನು ಅತಿಯಾಗಿ ತಿದ್ದಲು ಹೋಗಬೇಡ ಮನವೇ,
ಏಕೆಂದರೆ ಅಕ್ಷರ ತಿದ್ದಿದ್ದಷ್ಟು ಹಾಳೆಯೇ ಹರಿದು ಹೋಗುವದು.
ಸಂತೋಷ ಬೇರೆಯವರಿಗಾಗಿ ಇರುತ್ತದೆ ಏಕೆಂದರೆ ಅದನ್ನು ಹಂಚಿಕೊಳ್ಳುತ್ತೇವೆ,
ಆದರೆ ನೋವು ನಮ್ಮ ಸ್ವಂತದ್ದಾಗಿರುತ್ತದೆ ಏಕೆಂದರೆ ಅದನ್ನು ಎದೆಯಲ್ಲಿ ಮುಚ್ಚಿಟ್ಟುಕೊಳ್ಳುತ್ತೇವೆ.
Share On
74
ನಮ್ಮ ಬಾಯಿಗೆ ಹೋಗುವ ಆಹಾರ ಎಷ್ಟು ಶುದ್ಧವಾಗಿ ಬೇಕೋ ಹಾಗೆಯೇ,
ನಮ್ಮ ಬಾಯಿಂದ ಹೊರ ಬರುವ ಮಾತುಗಳು ಅಷ್ಟೇ ಶುದ್ಧ ವಾಗಿರಬೇಕು, ಆಗ ಸ್ನೇಹ ಸಂಬಂಧಗಳು ಶುದ್ಧವಾಗಿರುತ್ತದೆ.
ಒಳ್ಳೆಯ ಕೆಲಸಗಳನ್ನು ಮಾಡುತ್ತಾ ಹೋಗು ಪ್ರತಿಫಲದ ಬಗ್ಗೆ ಯೋಚನೆ ಮಾಡಬೇಡ....
ನೀನು ಮಾಡುವ ಕೆಲಸದಲ್ಲಿ ನಿಷ್ಠೆ, ಪ್ರಾಮಾಣಿಕತೆ, ಸತ್ಯ ಇದ್ದರೆ ಪ್ರತಿಫಲ ತಾನಾಗಿಯೇ ಒಲಿದು ಬರುತ್ತದೆ....!!!!!!!
Share On
75
ಯಾವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲವೋ ಅದನ್ನು ಬದಲಾಯಿಸಬೇಕು !!
ಯಾವುದನ್ನು ಬದಲಾಯಿಸಲು ಸಾಧ್ಯವಿಲ್ಲವೋ ಅದನ್ನು ಒಪ್ಪಿಕೊಳ್ಳಬೇಕು !
Share On
76
ಕನಸಿಗೂ-ನನಸಿಗೂ ಒಂದೇ ವ್ಯತ್ಯಾಸ,
ಕನಸು ಕಾಣಲು ಶ್ರಮವಿಲ್ಲದ ನಿದ್ದೆ ಬೇಕು,
ನನಸು ಮಾಡಲು ನಿದ್ದೆಯಿಲ್ಲದ ಶ್ರಮ ಬೇಕು.
Share On
77
ನಮ್ಮ ಮನಸ್ಸು ಸ್ವಲ್ಪ ಪೆಟ್ಟು ಬಿದ್ದರೂ ಒಡೆಯುವ ಗಾಜಿನಂತೆ ಇಟ್ಟು ಕೊಳ್ಳಬಾರದು.
ಅದು ಕಚ್ಛಾ ಜೇಡಿ ಮಣ್ಣಿನಂತೆ ಇಟ್ಟುಕೊಳ್ಳಬೇಕು,
ಆಗ ಜೀವನದ ಪ್ರತೀ ಹೊಡೆತಕ್ಕೂ ಅದು ಆಕಾರ ಪಡೆಯುತ್ತಾ ಹೋಗುತ್ತದೆ.
Share On
78
ಜೀವನದಲ್ಲಿ ಆಸೆ ಪಡುವುದು ತಪ್ಪಲ್ಲ ನಮ್ಮ ಯೋಗ್ಯತೆಗೆ ತಕ್ಕಂತೆ ಆಸೆ ಪಡಬೇಕು ಅಷ್ಟೆ.
ಮರಕ್ಕೆ ಬೇರು ಎಷ್ಟು ಮುಖ್ಯವೋ,
ಹಾಗೆಯೇ ಮನುಷ್ಯನಿಗೆ ನಂಬಿಕೆಯು ಕೂಡ ಅಷ್ಟೇ ಮುಖ್ಯ.
ಬೇರು ಇಲ್ಲವಾದರೆ ಮರ ಉಳಿಯುವುದಿಲ್ಲ,
ನಂಬಿಕೆ ಇಲ್ಲವಾದರೆ ಸಂಬಂಧಗಳು ಉಳಿಯುವುದಿಲ್ಲ,.
Share On
79
ನನ್ನಿಂದ ಸಾಧ್ಯವೇ ಎಂಬ ಪ್ರಶ್ನೆಯನ್ನು ನನ್ನಿಂದ ಸಾಧ್ಯ ಎಂದು ಬದಲಾಯಿಸುವುದು ಯಶಸ್ಸಿನ ಮೊದಲ ಹೆಜ್ಜೆ.
ಬಡತನದಲ್ಲಿ ಬೆಂದ ಹೆಣ್ಣು ಮಗಳು ತುಂಬಾ ಸ್ವಾಭಿಮಾನಿಯಾಗಿ ಬೆಳೆಯುತ್ತಾಳೆ.
ಜೀವನವನ್ನು ಎಂದು ಹಗುರವಾಗಿ ಪರಿಗಣಿಸುವುದಿಲ್ಲ ...
ಎಂಥ ಕಠಿಣ ಪರಿಸ್ಥಿತಿಯಲ್ಲೂ ಕುಗ್ಗದೆ ಎದುರಿಸಿ ನಿಲ್ಲುತ್ತಾಳೆ ಪ್ರತಿ ಪೈಸೆಗೂ ಬೆವರಿನ ಬೆಲೆ ಕಟ್ಟುತ್ತಾಳೆ...
Share On
80
ಮಾಡುವ ಪ್ರತಿ ಪಾಪವು ಸಾಲವಿದ್ದಂತೆ ಎಂದೋ ಒಂದು ದಿನ ಬಡ್ಡಿ ಸಮೇತ ಕಟ್ಟಲೇಬೇಕು.
ಮಾಡುವ ಪ್ರತಿ ಒಳ್ಳೆಯ ಕೆಲಸ ಉಳಿತಾಯ ಖಾತೆಯಲ್ಲಿ ಜಮೆ ಮಾಡಿದಂತೆ ಕಷ್ಟ ಕಾಲದಲ್ಲಿ ಸಹಾಯಕ್ಕೆ ಬರುತ್ತದೆ.
“ದಾರಿ ತಪ್ಪಿದರೂ ಬಾಯಿ ತಪ್ಪಬಾರದು.
ದಾರಿ ತಪ್ಪಿದರೆ ವಾಪಸ್ ಬಂದು ಸರಿ ದಾರಿಯಲ್ಲಿ ಹೋಗಬಹುದು.
ಬಾಯಿ ತಪ್ಪಿ ವಚನ ಭ್ರಷ್ಟರಾದರೆ ನಮ್ಮ ವ್ಯಕ್ತಿತ್ವಕ್ಕೆ ಧಕ್ಕೆಯಾಗುತ್ತದೆ”.
Share On
81
ತಪ್ಪು ಮಾಡುವ ಸಂದರ್ಭ ದಿನಾಲೂ ಬರುತ್ತದೆ,
ಆದರೆ ಒಳ್ಳೆಯದನ್ನು ಮಾಡುವ ಅವಕಾಶ ಒಮ್ಮೊಮ್ಮೆ ಬರುತ್ತದೆ ಆ ಅವಕಾಶವನ್ನು ಕಳೆದುಕೊಳ್ಳಬಾರದು.
“ಎಲ್ಲಾರ ಜೀವನದಲ್ಲೂ ಒಬ್ಬ ಮನುಷ್ಯ ಸಿಗೋದು ಸಹಜ ಆದ್ರೆ,
ಮನುಷ್ಯತ್ವ ಇರೋ ಮನುಷ್ಯ ಸಿಗೋದು ತುಂಬಾ ತುಂಬಾ ಕಷ್ಟ”.
Share On
82
ನಿಯತ್ತಾಗಿ ಇರುವವರು ಯಾವಾಗಲೂ ಗರ್ವದಿಂದ ಇರುತ್ತಾರೆ.
ಅವರಿಗೆ ನಟಿಸಲು ಬರುವುದಿಲ್ಲ.
ಅವರು ಯಾರ ಮುಂದೆಯೂ ತಲೆಭಾಗಿಸಲು ಬಯಸುವುದಿಲ್ಲ.
ಈ ಸ್ವಭಾವದಿಂದ ಅವರು ಎಲ್ಲರ ಕಣ್ಣಿನಲ್ಲಿ ಕೆಟ್ಟವರಾಗಿರುತ್ತಾರೆ
“ನಮ್ಮದೇ ಆದ ಒಂದು ನಿರ್ಧಾರ ಇರಬೇಕು ಅದುವೇ ಜೀವನ”.
Share On
83
ಖುಷಿ ಅನ್ನೋದು ಒಂದು ಸೂರ್ಯನ ಪ್ರತಿಬಿಂಬ ಇದ್ದಂಗೆ,
ಕೆಲವೊಂದು ಸನ್ನಿವೇಶ ಮೋಡ ಕವಿದಂಗೆ ಆಗುತ್ತೆ,
ಆದರೆ ಯಾವತ್ತೂ ಯಾರಿಗೂ ತೊಂದರೆ ಕೊಡಲ್ಲ.
ಅದೇ ತರ ನಮ್ಮ ಜೀವನ ಆಗಿರಬೇಕು.
ಕಷ್ಟಗಳು ಎದುರಾಗುವದು ನಮ್ಮ ದೌರ್ಬಲ್ಯವನ್ನು ಪ್ರದರ್ಶಿಸುವದಕಲ್ಲ,
ನಮ್ಮ ಸಾಮರ್ಥ್ಯವನ್ನು ಪರೀಕ್ಷೇ ಮಾಡುವದಕ್ಕೆ.
Share On
84
ಹೂ ಎಂದಿಗೂ ಎರಡು ಬಾರಿ ಅರಳುವುದಿಲ್ಲ ಈ ಜನ್ಮ ಮತ್ತೆ ಮತ್ತೆ ಬರುವುದಿಲ್ಲ.
ಜೀವನದಲ್ಲಿ ಸಾವಿರಾರು ಜನರು ಸಿಕ್ಕರೂ ಮನಸ್ಸಿಗೆ ಎಲ್ಲರೂ ಇಷ್ಟವಾಗುವುದಿಲ್ಲ,
ಇಷ್ಟ ಆದವರನ್ನು ಒಮ್ಮೆ ಕಳೆದುಕೊಂಡರೆ,
ಅಂತವರು ಮತ್ತೆ ಮತ್ತೆ ಸಿಗುವುದಿಲ್ಲ.
Share On
85
ಹೂವಿನಹಾರ ಎಲ್ಲರಿಗೂ ಕಾಣಿಸುತ್ತದೆ.
ಆದರೆ,
ಅದರ ಒಳಗಿರುವ ದಾರ ಯಾರ ಕಣ್ಣಿಗೂ ಕಾಣಿಸುವುದಿಲ್ಲ;
ಹಾಗೆಯೇ,
ನಮ್ಮ ಚಿಕ್ಕ ತಪ್ಪುಗಳು ಎಲ್ಲರ ಕಣ್ಣಿಗೂ ಕಾಣಿಸುತ್ತದೆ.
ಆದರೆ,
ನಮ್ಮೊಳಗೆ ಇರುವ ಒಳ್ಳೆಯತನ ಯಾರಿಗೂ ಕಾಣುವುದಿಲ್ಲ.
ಸಮಸ್ಯೆಗಳಿಂದ ತಪ್ಪಿಸಿಕೊಂಡು ಬದುಕುವುದು ಜೀವನವಲ್ಲ,
ಸಮಸ್ಯೆಗಳೊಂದಿಗೆ ಬದುಕುವುದೇ ನಿಜವಾದ ಜೀವನ.
Share On
86
ಅವಕಾಶ ಸಿಕ್ಕಿದೆ ಎಂದು ಯಾರಿಗೂ ಅವಮಾನ ಮಾಡಬೇಡಿ,
ಸಮಯ ಒಂದೇ ರೀತಿ ಇರುವುದಿಲ್ಲ,
ಸಮಯವು ಎಲ್ಲರಿಗೂ ಅವಕಾಶ ಮಾಡಿಕೊಡುತ್ತದೆ.
ಕೆಳಗೆ ಬಿದ್ದವನು ಮೇಲೆಳಲೇ ಬೇಕು.
ಪರಸ್ಥಿತಿ ಏನೇ ಇರಲಿ,
ಮುಖದಲ್ಲಿ ಒಂದು ಸಣ್ಣ ನಗುವಿರಲಿ.
Share On
87
ಮಾತಿನಿಂದ ನೋಯಿಸಿದವರನ್ನು ನೀವು ಲೆಕ್ಕಕ್ಕೆ ಇಟ್ಟುಕೊಳ್ಳಬೇಡಿ,
ನಿಮ್ಮ ನೋವಿಗೆ ಧೈರ್ಯ ತುಂಬಿ ನಿಮ್ಮ ಜೊತೆ ಇರುವವರನ್ನು ನೀವು ಜೀವನ ಪೂರ್ತಿ ನಂಬಿ.
ಪ್ರತಿಭೆ ಮತ್ತು ರೂಪ ದೇವರ ಕೊಡುಗೆ.
ಕೀರ್ತಿ ಮತ್ತು ಹಣ ಮನುಷ್ಯನ ಸೃಷ್ಟಿ.
ವ್ಯಕ್ತಿತ್ವ ಮತ್ತು ಅಹಂಕಾರ ನಾವೇ ರೂಪಿಸಿಕೊಂಡಿದ್ದು.
ಆಲೋಚಿಸಿ ಮುಂದೆ ನಡಿಯಿರಿ.
Share On
88
ನೀನು ಯಾವುದೇ ಸೇಡು ತೀರಿಸಿಕೊಳ್ಳುವ ಅವಶ್ಯಕತೆ ಇಲ್ಲ,
ಕೇವಲ ಒಂದು ಹೆಜ್ಜೆ ಹಿಂದೆ ಇಟ್ಟು ಕಾದು ನೋಡು ನಿನ್ನನ್ನು ನೋವಿನಿಂದ ನರಳುವಂತೆ ಮಾಡಿದವರು,
ಕ್ರಮೇಣ ತಮ್ಮನು ತಾವೇ ನೋವಿನಿಂದ ನರಳಿಸಿಕೊಳ್ಳುತ್ತಾರೆ,
ನೀನು ಅದೃಷ್ಟಶಾಲಿಯಾದರೆ ಅದನ್ನೆಲ್ಲ ನೀನು ನೋಡುವೆ.
Share On
89
ಕೆಟ್ಟ ದಿನಗಳು ಇದ್ದ ಮಾತ್ರಕ್ಕೆ ಜೀವನವೇ ಕೆಟ್ಟದು ಅಂತ ಭಾವಿಸಬಾರದು,
ರಾತ್ರಿ ಕಳೆದು ಬೆಳಕು ಮೂಡುವ ರೀತಿಯಲ್ಲಿ ಒಳ್ಳೆಯ ದಿನಗಳು ಬಂದೆ ಬರುತ್ತವೆ,
ತಾಳ್ಮೆ ಆತ್ಮ ವಿಶ್ವಾಸ ನಂಬಿಕೆ ಜೊತೆ ಇರಬೇಕು ಅಷ್ಟೇ.
Share On
90
ಮನೆಗಿಂತ ಬಾಗಿಲು ಚಿಕ್ಕದು,
ಬಾಗಿಲಿಗಿಂತ ಬೀಗ ಚಿಕ್ಕದು,
ಬೀಗಕ್ಕಿಂತ ಬೀಗದ ಕೀ ಚಿಕ್ಕದು,
ಹೇಗೆ ಬೀಗದ ಕೀ ಯಿಂದ ದೊಡ್ಡ ಮನೆಯನ್ನು ಪ್ರವೇಶಿಸ ಬಲ್ಲೆವೊ,
ಅದೇ ರೀತಿ ಒಂದು ಸಣ್ಣ,ಉತ್ತಮ ಆಲೋಚನೆಯಿಂದ ದೊಡ್ಡ ಸಮಸ್ಯೆಯನ್ನು ಬಗೆಹರಿಸಬಹುದು
Share On
91
✍️ಎಷ್ಟೆ ಕಷ್ಟಗಳಿರಲಿ ನಂಬಿಕೆ ಮಾತ್ರ ಕಳೆದುಕೊಳ್ಳಬೇಡಿ,
ನಿಮ್ಮ ಸಹನೆ ನಿಮ್ಮ ಜೀವನಕ್ಕೆ ಒಳ್ಳೆಯ ದಾರಿ ಹುಡುಕಿಕೊಡುತ್ತದೆ.
ಎಲ್ಲ ಕಷ್ಟಗಳೆಂಬ ಕತ್ತಲೆಯ ಹಿಂದೆ ಸುಖದ ಬೆಳಕು ಇದ್ದೆ ಇರುತ್ತದೆ.
ಸಮಾಧಾನದಿಂದ ಹುಡುಕುವ ಪ್ರಯತ್ನ ಮಾಡಿ.
ಈ ಜೀವನ ಸಹನೆಯ ಜೊತೆಗೆ ಸಾಗಲೇಬೇಕು.
ದೇವರು ಎಲ್ಲವನ್ನೂ ಕೊಟ್ಟಿದ್ದಾನೆ.✍️
Share On
92
ಒಂಟಿತನ ಅಂದ್ರೆ ಯಾರು ಇಲ್ಲದೇ ಇರೋದಲ್ಲ,
ಎಲ್ಲರೂ ಇದ್ದರೂ ಯಾರೂ ಅರ್ಥ ಮಾಡಿಕೊಳ್ಳದೇ ಇರೋದೇ ನಿಜವಾದ ಒಂಟಿತನ.
ಸಂಬಂಧಗಳು, ಜೀವಕ್ಕಿಂತ ಮುಖ್ಯ.
ಸಂಬಂಧಗಳಲ್ಲಿ,
ಜೀವವಿರುವುದು ಅದಕ್ಕಿಂತಲೂ ಮುಖ್ಯ.
Share On
93
ಯಾವುದೇ ಕೆಲಸ ಮಾಡಲು ಬೇಕಾಗಿರುವುದು ಬರೀ ಕೌಶಲ್ಯವಲ್ಲ.
ಮಾಡಬೇಕು ಎಂಬ ಹಂಬಲ, ಮಾಡಿಯೇ ತೀರುವ ಮನೋಬಲ.
ಜೀವನ ಇರುವವರಿಗೂ ಕಲಿಯುತ್ತಲೇ ಇರಿ.
ಏಕಂದರೆ
ಅನುಭವಕ್ಕಿಂತ ಉತ್ತಮ ಶಿಕ್ಷಣ ಮತ್ತೊಂದಿಲ್ಲ.
Share On
94
ಮನುಷ್ಯ ಎತ್ತರಕ್ಕೆ ಬೆಳೆದಂತೆ
ಬಾಗುವುದನ್ನು ಕಲಿಯಬೇಕು,
ಆಗಲೇ ಬದುಕು ಸುಂದರ.
Share On
95
ಯಾವುದೇ ಫಲಾಪೇಕ್ಷೆಯಿಲ್ಲದೆ,
ಎಲ್ಲರಿಗೂ ಒಳ್ಳೆಯದನ್ನೇ ಬಯಸಿ,
ಸಾಧ್ಯವಾದಷ್ಟು ಒಳ್ಳೆಯನ್ನೆ ಮಾಡಿ,
ಏಕೆಂದರೆ ಹೂ ಮಾರುವವರ ಕೈಯಲ್ಲಿ
ಯಾವಾಗಲೂ ಹೂವಿನ ಸುವಾಸನೆ ಇರುತ್ತದೆ.
Share On
96
ಒಳ್ಳೆಯ ಮನಸ್ಸಿನಿಂದ ಯೋಚಿಸಿದರೆ,
ಕೆಟ್ಟವರಲ್ಲೂ ಒಳ್ಳೆಯ ತನವನ್ನು ಕಾಣಬಹುದು.
ಆದರೆ,
ಕೆಟ್ಟ ಮನಸ್ಸಿನಿಂದ ಯೋಚಿಸಿದರೆ,
ಒಳ್ಳಯವರಲ್ಲೂ ಕೆಟ್ಟದ್ದೇ ಕಾಣಿಸುತ್ತದೆ.
Share On
97
ಅತಿಯಾಗಿ ನೋವು ಅನುಭವಿಸಿದ ವ್ಯಕ್ತಿ ಯಾರೊಂದಿಗೂ ಬೆರೆಯುವುದಿಲ್ಲ.
ಅತಿಯಾಗಿ ನಗುವ ವ್ಯಕ್ತಿ ಯಾರೊಂದಿಗೂ ನೋವನ್ನು ಹಂಚಿಕೊಳ್ಳುವುದಿಲ್ಲ.
Share On
98
ಸಮಯ ಒಳ್ಳೆದೇ ಆಗಲಿ
ಕೆಟ್ಟದೆ ಆಗಲಿ
ಒಂದು ಪಾಠವನ್ನು ಕಲಿಸೇ ಕಲಿಸುತ್ತದೆ.
ಒಳ್ಳೆ ಸಮಯದಲ್ಲಿ ಎಲ್ಲರೂ ನಮ್ಮವರಾಗಿ,
ಕೆಟ್ಟ ಸಮಯದಲ್ಲಿ ನಮ್ಮವರೇ ಬೇರೆಯವರಾಗಿ ಬದಲಾಗುತ್ತಾರೆ.
Share On
99
ಮದ್ಯಪಾನ ಮಾಡುವವನು ಕೇವಲ ಮದ್ಯವನ್ನು ಕುಡಿಯುವುದಿಲ್ಲ,
ಅವನು ತನ್ನ ತಾಯಿಯ ಸಂತೋಷ,
ಅವನ ಹೆಂಡತಿಯ ಶಾಂತಿ,
ಅವನ ಮಕ್ಕಳ ಕನಸು,
ಅವನು ತನ್ನ ತಂದೆಯ ಖ್ಯಾತಿಯನ್ನು ಒಂದೇ ಗುಟುಕಿನಲ್ಲಿ ಕುಡಿಯುತ್ತಾನೆ.
Share On
100
ಶರೀರಕ್ಕೆ ಸೇರಿದ ವಿಷದಿಂದಾಗಿ,
ಒಬ್ಬ ವ್ಯಕ್ತಿ ಒಂದೇ ಸಾರಿ ಸಾಯುವನು.
ಆದರೆ,
ಕಿವಿಗೆ ಸೇರಿದ ಚಿಕ್ಕ ಚಿಕ್ಕ ವಿಷ ವಿಷಯಗಳನ್ನು ಮನಸಿನಲ್ಲಿಟ್ಟುಕೊಳ್ಳುವುದರಿಂದ,
ದೊಡ್ಡ ದೊಡ್ಡ ಸಂಬಂಧಗಳು ದುರ್ಬಲಗೊಳ್ಳುವುದಲ್ಲದೆ,
ಸಂಬಂಧಗಳನ್ನು ತೊರೆಯಲು ಆಗದೆ ನಿಭಾಯಿಸಲು ಸಾಧ್ಯವಾಗದೆ ವ್ಯಕ್ತಿ ಕ್ಷಣ ಕ್ಷಣಕ್ಕು ಸಾಯುತ್ತಾನೆ.
Share On
101
ಒಬ್ಬರ ಸರಳ ಸ್ವಭಾವ ಅವರ ಬಲಹೀನತೆ ಅಲ್ಲ,
ಪ್ರಪಂಚದಲ್ಲಿ ನೀರಿಗಿಂತ ಸರಳ ಯಾವುದೂ ಇಲ್ಲ,
ಆದರೆ ಅದರ ರಭಸಕ್ಕೆ ಎಲ್ಲವನ್ನು ಗೆಲ್ಲುವ ಸಾಮರ್ಥ್ಯವಿದೆ.
Share On
102
ಯಾವ ವ್ಯಕ್ತಿ ಸತ್ಯ, ನೀತಿ, ಪ್ರೀತಿ, ದಯೆ, ಕರುಣೆ, ತ್ಯಾಗ ಮತ್ತು ಸಂಯಮದ ಹಾದಿಯಲ್ಲಿ ನಡೆಯುತ್ತಾನೋ ಅವನು ಮಾತ್ರ ನೆಮ್ಮದಿಯ ಜೀವನ ನಡೆಸಬಹುದು.
ಮೋಸ, ವಂಚನೆ, ಕಪಟ, ಸ್ವಾರ್ಥ, ಮದಮಸ್ಸರ, ಅತೀ-ಕಾಮಿಸ್ಟ ಮತ್ತು ಅಂಹಕಾರದ ಹಾದಿಯಲ್ಲಿ ನಡೆಯುವವನಿಂದ ಸಾಧ್ಯವಿಲ್ಲ.
Share On
103
ಕಣ್ಣು ತೆರೆದರೆ ಜನನ,
ಕಣ್ಣು ಮುಚ್ಚಿದರೆ ಮರಣ,
ಜನನ ಮರಣಗಳ ನಡುವೆ,
ರೆಪ್ಪೆ ಆಡಿಸುತ್ತಿರುವುದೇ ಜೀವನ.
Share On
104
ಜೀವನದಲ್ಲಿ ಎಲ್ಲರಿಗೂ ಹಿನ್ನಡೆಯ
ದಿನಗಳು ಇರುತ್ತವೆ.
ಹಿನ್ನಡೆಯನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳಬೇಕು.
ಜಗತ್ತಿಗೆ ಬೆಳಕು ಚೆಲ್ಲುವ ಸೂರ್ಯ ಚಂದ್ರರಿಗೂ ಗ್ರಹಣ ಹಿಡಿಯುತ್ತದೆ.
ಕತ್ತಲು ಕವಿಯುತ್ತದೆ.
ಗ್ರಹಣ ಬಿಟ್ಟ ನಂತರ ಸೂರ್ಯ ಚಂದ್ರ ಮತ್ತೆ ಪ್ರಜ್ಜಲಿಸುತ್ತಾರೆ ಅಂತೇ ನಮ್ಮ ಜೀವನ.
Share On
105
ಕತ್ತಲು ಕತ್ತಲೆಯನ್ನು ಎಂದು ಓಡಿಸಲಾಗದು
ಅದಕ್ಕೆ ಬೆಳಕು ಬೇಕು.
Share On
106
ಸಂಬಂಧಗಳು ದೀಪದ ಎಣ್ಣೆಯಂತಿರಬೇಕು,
ಯಾರು ಎಷ್ಟೇ
ಬತ್ತಿಯಿಟ್ಟರೂ ಅದು ಬೆಳಗುತ್ತಿರಬೇಕು.
Share On
107
ನಾನು ಎಂಬುದ ಮರೆತು
ನನ್ನಿಂದಲೇ ಎಂಬುದ ತೊರೆದು,
ನಾವು ಎಂಬುದ ನೆನೆದು
ನಮ್ಮಿಂದ ಎಂಬುದ ಮನಸಿಟ್ಟು,
ಎಲ್ಲರೊಳಗೊಂದಾಗಿ ಬದುಕಿದರೆ
ಅವನೇ ನಿಜವಾದ ಸಾಧಕ.
ಅದುವೇ ಬದುಕಿನ ಸಾದನೆ.
Share On
108
ಮನಸ್ಸಿಟ್ಟು ಕಲಿತ ಅಕ್ಷರ,
ಮೈ ಬಗ್ಗಿಸಿ ದುಡಿದು ತಿನ್ನುವ ಅನ್ನ,
ಕಷ್ಟ ಪಟ್ಟು ಗಳಿಸಿದ ಸಂಪಾದನೆ,
ಯಾವತ್ತೂ ಯಾರನ್ನು ಕೈ ಬಿಡುವುದಿಲ್ಲ.
Share On
109
ನಮಗೆ ಎಷ್ಟೇ ಜ್ಞಾನವಿದ್ದರೂ,
ಕೆಲವೊಮ್ಮೆ ನಮ್ಮ ಲೆಕ್ಕಚಾರಗಳು ತಪ್ಪಿಬಿಡುತ್ತದೆ.
ಯಾಕೆಂದರೆ ನಾವು ಕೂಡಿಸಿ ಗುಣಿಸುವಷ್ಟರಲ್ಲಿ,
ಮೇಲಿರುವವನು ನಮ್ಮನ್ನೇ ಬಾಗಿಸಿ ಕಳೆದಿರುತ್ತಾನೆ.
Share On
110
ಬಹಳ ಒಳ್ಳೆಯವನಾದ್ರೆ
ಹೆಚ್ಚು ಜನ ನಿನ್ನ ಪ್ರೀತಿಸ್ತಾರೆ ಅಂಡ್ಕೊಬೇಡ,
ಹೆಚ್ಚು ಜನ ನಿನ್ನ ಬಳಸಿಕೊಳ್ತಾರೆ.
ಅಷ್ಟೇ.
Share On
111
ಪ್ರಪಂಚದಲ್ಲಿ ಯಾವುದೇ ವಸ್ತು ಎಷ್ಟೇ ದುಬಾರಿ ಆಗಿರಬಹುದು..
ಆದರೆ ನಿದ್ರೆ, ನೆಮ್ಮದಿ ಹಾಗೂ ಸಂತೋಷಕ್ಕೆ ಇರುವಷ್ಟು ಬೆಲೆ ಯಾವ ವಸ್ತುವಿಗೂ ಇಲ್ಲ.
ಈ ಜಗತ್ತಿನಲ್ಲಿ ಯಾರೂ ಪರಿಪೂರ್ಣರಲ್ಲ...!!
ಪ್ರತಿಯಬ್ಬರಲ್ಲೂ ಒಂದಲ್ಲಾ ಒಂದು ಕೊರತೆ ಇರುತ್ತದೆ...!!
ದಿನದಿಂದ ದಿನಕ್ಕೆ ಪರಿಪೂರ್ಣತೆಯ ಕಡೆಗೆ ಸಾಗುವುದೇ ಜೀವನ.
ಸಾಗರದಷ್ಟು ಸಂಕಷ್ಟಗಳ ನಡುವೆಯೂ ಸುಖವಾಗಿ ಬದುಕುವಂತೆ ಮಾಡುವುದು ನಂಬಿಕೆ ಮತ್ತು ನೆಮ್ಮದಿ.
Share On
114
ಅದೃಷ್ಟದ ಬಗ್ಗೆ ಗೊತ್ತಿಲ್ಲ...
ಆದರೆ ಕಷ್ಟಪಡುವವರಿಗೆ ಅವಕಾಶಗಳು ಖಂಡಿತವಾಗಿಯೂ ಸಿಗುತ್ತದೆ.
ಅನುಭವ ಎನ್ನುವುದು ವಯಸ್ಸಿನಿಂದ ಬರುವುದಿಲ್ಲ ಅದು ಸಮಯ ಸಂದರ್ಭ ಪರಿಸ್ಥಿತಿಯನ್ನು ಎದುರಿಸುವುದರಿಂದ ಬರುತ್ತದೆ.
Share On
115
ಒಳ್ಳೆಯ ಮನಸ್ಸು ಇರೋರಿಗೆ ದುಃಖ ಜಾಸ್ತಿ.
ಕನಿಕರ ಇರೋರಿಗೆ ಕಷ್ಟಗಳು ಜಾಸ್ತಿ.
ಕಷ್ಟದ ಸಮಯದಲ್ಲಿ ದೇವರು ಏಕೆ ಸುಮ್ಮನಿದ್ದಾನೆ ಎಂದು ಚಿಂತಿಸಬೇಡಿ
ಏಕೆಂದರೆ ಪಾಠ ಕಲಿಸಿದ ಶಿಕ್ಷಕರು ಕೂಡ ಪರೀಕ್ಷಾ ಕೊಠಡಿಯಲ್ಲಿ ಸುಮ್ಮನೆ ಇರುತ್ತಾರೆ.
Share On
116
ನಂಬಿ ಬದುಕುವುದು ಬೇರೆ,
ನಂಬಿಸುತ್ತಾ ಬದುಕುವುದು ಬೇರೆ,
ನಂಬಿ ಬದುಕುವುದರಲ್ಲಿ ಪ್ರೀತಿ ಇರುತ್ತದೆ,
ನಂಬಿಸುತ್ತಾ ಬದುಕುವುದರಲ್ಲಿ ಸ್ವಾರ್ಥ ಮಾತ್ರ ಇರುತ್ತದೆ.
Share On
117
ಜ್ಞಾನವೆಂಬ ಸಂಪತ್ತು,
ತಾಳ್ಮೆಯೆಂಬ ಆಯುಧ,
ಜತೆಗೆ ನಗುವಿನಂಥ ಶಕ್ತಿವರ್ಧಕ ಹೊಂದಿದವರನ್ನು
ಯಶಸ್ಸು ಎಲ್ಲಾ ದಿಕ್ಕುಗಳಿಂದ ಬಂದು ಸೇರುತ್ತದೆ.
Share On
118
ಸಿಗದವರನ್ನು ಹುಡುಕಬೇಡಿ,
ಸಿಕ್ಕಿದವರನ್ನು ಬಿಡಬೇಡಿ,
ಬರದವರನ್ನು ಕಾಯಬೇಡಿ,
ಏನನ್ನು ಕೊಡದೆ ಇರುವವರನ್ನು ಕೇಳಬೇಡಿ,
ಕೊಟ್ಟವರನ್ನು ಜೀವನದಲ್ಲಿ ಮರೆಯಬೇಡಿ.
Share On
119
ಸಿಕ್ಕಿದ್ದನ್ನು ಪಡೆದು ತೃಪ್ತಿಯಿಂದ ಬಾಳಬೇಕು,
ಸಿಗದಿದ್ದನ್ನು ಮರೆತು ಖುಷಿಯಿಂದ ಬದುಕಬೇಕು,
ಇಂದು ಸಿಕ್ಕಿದ್ದು ನಾಳೆ ಕೈ ಜಾರಿ ಹೋಗಬಹುದು,
ಇಂದು ಸಿಗದಿದ್ದು ನಾಳೆ ಒಲಿಯಬಹುದು,
ಯೋಗ ವಿದ್ದಂತೆ ಭೋಗವಿರುತ್ತದೆ.
Share On
120
ನಾವು ಒಬ್ಬರ ಬಗ್ಗೆ ಒಬ್ಬರು ಮಾತನಾಡುವುದಕ್ಕಿಂತ,
ಒಬ್ಬರಿಗೊಬ್ಬರು ಮಾತನಾಡಿ ಕೊಂಡರೆ
ನಮ್ಮ ಎಷ್ಟೋ ಸಮಸ್ಯೆಗಳನ್ನು ಪರಿಹರಿಸಿ ಕೊಳ್ಳಬಹುದು.
Share On
121
ಬಡತನ ಮನುಷ್ಯನಿಗಿರಬೇಕು,
ಮನಸ್ಸಿಗೆ ಇರಬಾರದು.
ಅದೇ ಶ್ರೀಮಂತಿಕೆ ಮನಸ್ಸಿಗೆ ಇರಬೇಕು,
ಮನುಷ್ಯನಿಗೆ ಇರಬಾರದು.
Share On
122
ಪ್ರತಿ 24 ಗಂಟೆಗೆ ದಿನ ಬದಲಾದರೇ 365 ದಿನಕ್ಕೊಮ್ಮೆ ವರುಷ ಬದಲಾಗುತ್ತೇ
ಆದರೇ ಮನುಷ್ಯರು ಮಾತ್ರ ಅವಶ್ಯಕತೆಗೆ ತಕ್ಕಂತೆ ಕ್ಷಣಕ್ಕೊಮ್ಮೆ ಬದಲಾಗುತ್ತಿರುತ್ತಾರೆ.
Share On
123
ಪ್ರಪಂಚದಲ್ಲಿ ಪದಗಳು ಉಚಿತವಾಗಿಯೇ ಸಿಗುತ್ತವೆ.
ಆದರೆ ಅವುಗಳನ್ನು ನಾವು ಹೇಗೆ ಬಳಸುತ್ತೇವೆ ಎಂಬುದರ ಮೇಲೆ ನಮ್ಮ ಮೌಲ್ಯ ನಿರ್ಧಾರವಾಗುತ್ತದೆ.
Share On
124
ಸಂಪಾದನೆ ಎಂದರೆ ಕೇವಲ ಹಣವನ್ನು ಮಾತ್ರ ಸಂಪಾದಿಸುವುದಲ್ಲ.
ಅನುಭವ, ಸಂಬಂಧ, ಗೌರವ, ಪ್ರೀತಿ ವಾತ್ಸಲ್ಯ ಇವೂ ಕೂಡ ಒಂದು ರೀತಿಯ ಸಂಪಾದನೆಯೇ...!ಆಗಿವೆ,
ಹಣದ ಜೊತೆಗೆ ಇವು ಕೂಡ ತುಂಬಾನೇ ಮೌಲ್ಯಯುತವಾದ ಸಂಪಾದನೆಯಾಗಿದೆ.
Share On
125
ಖುಷಿ ಸಂತೋಷ ಎನ್ನುವುದು ಪ್ರತಿಯೊಬ್ಬ ವ್ಯಕ್ತಿಯ ಒಳಗಿರುವ ಅಕ್ಷಯ ಪಾತ್ರೆ ಅದು ಎಂದಿಗೂ ಬರಿದಾಗುವುದಿಲ್ಲ,
ತನ್ನಲ್ಲಿರುವ ಖುಷಿಯನ್ನು ಇತರರೊಂದಿಗೆ ಹಂಚುವ ಮೂಲಕ ಇನ್ನೊಬ್ಬರ ಮೊಗದಲ್ಲಿ ಆ ಸಂತಸವನ್ನು ಕಾಣಬಹುದು.
Share On
126
ಎಷ್ಟು ತಾಳ್ಮೆಯಿಂದ ಇರುತ್ತೀವೋ ಅಷ್ಟು ಅಗ್ರಸ್ಥಾನ,
ಎಷ್ಟು ದೂರ ಇರುತ್ತೀವೋ ಅಷ್ಟು ಗೌರವ,
ಎಷ್ಟು ಕಡಿಮೆ ಆಸೆ ಪಡುತ್ತೀವೋ ಅಷ್ಟು ಪ್ರಶಾಂತತೆ,
ಎಷ್ಟು ಕಡಿಮೆ ಮಾತನಾಡುತ್ತೀವೋ ಅಷ್ಟು ಬೆಲೆ.
Share On
127
ಸುರಿದು ಹೋದ ಮಳೆ,
ಸರಿದು ಹೋದ ವೇಳೆ ಮತ್ತೆ ಸಿಗಲಾರದು,
ಹಾಗೆಂದು ಅದರೊಳಗೆ ನಾವುಗಳು ಕಳೆದು ಹೋಗಲಾರೆವು.
ಕೈ ಒಳಗಿರುವ ಕೈಗೆ ಸಿಗಲಾರದ ನಾಳೆಗಳ ಚಿಂತೆ ಬೇಡ, ಕಣ್ಣೆದುರಿಗಿರುವ ಈ ಕ್ಷಣಗಳಲ್ಲಿ ಬದುಕುವ ಸೊಗಸು ನಮ್ಮೊಳಗಿರಲ.
Share On
128
ತಪ್ಪುಗಳು, ಸೋಲುಗಳು, ಅವಮಾನಗಳು, ತಿರಸ್ಕಾರಗಳು
ಇವುಗಳೆಲ್ಲವೂ ಉನ್ನತಿ ಮತ್ತು ಬೆಳವಣಿಗೆಯ ಭಾಗಗಳು.
ಯಾವ ವ್ಯಕ್ತಿಯೂ ಈ ಅನುಭವಗಳಿಂದ ಹಾದು ಹೋಗದೆ ಜೀವನದಲ್ಲಿ ಗೌರವದ ಸ್ಥಾನವನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ.
Share On
129
ಬದುಕೆಂಬುದು ಚಿತ್ರವೊಂದರ ರೇಖೇಗಳಂತೆ
ಚಿತ್ರಕಾರನ ಕೖಯ್ಯಲ್ಲಿ ಅಳಿಸುವ ರಬ್ಬರ್ ಇರುತ್ತದೆ
ಆದರೆ
ಬದುಕಿನ ಚಿತ್ರಕಾರನ ಬಳಿ ಅದಿರುವುದಿಲ್ಲ
ಆದರೆ
ಯೋಚಿಸಿ ಕೆಲಸಮಾಡಬಹುದು!
Share On
130
ಅತಿಯಾಗಿ ಚಿಂತಿಸದಿರು,
ಇನ್ನೊಬ್ಬರ ಬಾಳ ಪುಸ್ತಕದಲ್ಲಿ ನೀನೊಂದು ಅದ್ಯಾಯವಷ್ಟೇ,
ಅರ್ಥವಾದರೂ ಆಗದೆ ಇದ್ದರೂ ,
ಇಷ್ಟವಾದರೂ ಆಗದೆ ಇದ್ದರೂ ಪುಟವನ್ನು ತಿರುಗಿಸಿಯೇ ತಿರುಗಿಸುವರ
Share On
131
ಉತ್ತಮವಾದ ಬದುಕು ಸಿಗುವುದು ಅಪರೂಪ,
ಸಿಕ್ಕ ಬದುಕನ್ನು ಉತ್ತಮವಾಗಿ ಕಟ್ಟಿಕೊಳ್ಳುವುದು ಇನ್ನೂ ಕಠಿಣ....
ಕಷ್ಟವಾಗಲಿ ಸುಖ ವಿರಲಿ,
ಇದ್ದ ಬದುಕನ್ನು ಪ್ರೀತಿಸೋಣ.
Share On
132
ಎತ್ತರಕ್ಕೆ ಏರಬಯಸುವ ವ್ಯಕ್ತಿ ಯಾವಾಗಲು
ಏಣಿ ಕಟ್ಟುವ ಕಾರ್ಯದಲ್ಲಿ ನಿರತನಾಗಿರುತ್ತಾನೆ ವಿನಃ,
ಇನ್ನೊಬ್ಬರ ಏಳ್ಗೆಗೆ ಕಲ್ಲು ಹಾಕುವುದರಲ್ಲಿ ಅಲ್ಲ.
Share On
133
ಅನುಮಾನ ತಪ್ಪಾಗಬಹುದು,
ಅನುಭವ ಎಂದಿಗೂ ತಪ್ಪಾಗಲ್ಲಾ.
ಅನುಮಾನ ಕೇವಲ ನಮ್ಮ ಮನಸ್ಸಿನ ಕಲ್ಪನೆ,
ಅನುಭವ ಜೀವನದಲ್ಲಿ ನಾವು ಕಲಿತ ಪಾಠ.
Share On
134
ಅದ್ಭುತ ಬದುಕನ್ನು ಕಟ್ಟಿಕೊಳ್ಳಲು ಒಂದು ಕಡೆ
ಕಷ್ಟಗಳು ಇರಬೇಕು,
ಇನ್ನೊಂದು ಕಡೆ ನಂಬಿಕೆ ಇರಬೇಕು,
ಕಷ್ಟಗಳು ಪಾಠ ಕಲಿಸಿದರೆ
ನಂಬಿಕೆಗಳು ಶಕ್ತಿ ತುಂಬುತ್ತವೆ.
Share On
135
ಅದೃಷ್ಟವಂತ ಎಂದರೆ,
ಅವಕಾಶಗಳ ಪಡೆವವನು,
ಬುದ್ಧಿವಂತ ಎಂದರೆ,
ಅವಕಾಶ ಸೃಷ್ಟಿಸಿಕೊಳುವವನು.
Share On
136
ಒಬ್ಬ ಮನುಷ್ಯನ ಬಗ್ಗೆ ಮತ್ತೊಬ್ಬ ಮನುಷ್ಯನಿಗೆ ಜೀವನ ಪರ್ಯಂತ ನೆನಪು ಇರುವುದು ಕೇವಲ ಎರಡೇ, ಎರಡು ವಿಷಯಗಳು.
1. ಕೈಯಿಂದ ಮಾಡಿದ ಸಹಾಯ.
2. ಮಾತಿನಿಂದ ಮನಸ್ಸಿಗೆ ಮಾಡಿದ ಗಾಯ.
Share On
137
ನಂಬಿಕೆ ಇಲ್ಲದ ಕಡೆ ವಾದ ಮಾಡಬೇಡಿ
ತಪ್ಪಿಲ್ಲದ ಕಡೆ ತಲೆ ತಗ್ಗಿಸಬೇಡಿ
ಬೆಲೆ ಇಲ್ಲದ ಕಡೆ ಪ್ರೀತಿ ಬಯಸಬೇಡಿ
Share On
138
ಋಣ ಇದ್ದರೆ ಬೆಟ್ಟದ ತುದಿಯಲ್ಲಿರುವ
ಹಣ್ಣು ಕೂಡ ನಮ್ಮ ಪಾಲಾಗುತ್ತದೆ,
ಋಣ ಇಲ್ಲದೆ ಹೋದರೆ ಅಂಗೈಯಲ್ಲಿರುವ
ಹಣ್ಣು ಕೂಡ ಜಾರಿ ಬಿದ್ದು ಅನ್ಯರ ಪಾಲಾಗುತ್ತೆ.
Share On
139
ಪರಿಸ್ಥಿತಿ ಕೆಟ್ಟರು
ಮನಸ್ಥಿತಿ ಕೇಡಬಾರದು
ಯಾಕೆಂದರೆ ಪರಿಸ್ಥಿತಿಯನ್ನು ಸರಿಪಡಿಸಬಹುದು ಆದರೆ ಮನಸ್ಥಿತಿಯನ್ನು ಸರಿ ಪಡಿಸಲು ತುಂಬಾನೇ ಕಷ್ಟ
ಯಾರು ಯಾವುದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ನಮ್ಮ ಮನಸ್ಸು ಹಾಳು ಮಾಡಿಕೊಳ್ಳಬೇಡಿ.
Share On
140
ಸಮಯ ಮತ್ತು ಸಂದರ್ಭ ಎರಡಕ್ಕೂ ಇರುವ ವ್ಯತ್ಯಾಸ ಎಂದರೆ,
ಸಮಯ ತುಂಬಾ ಜನರನ್ನು ಪರಿಚಯಿಸುತ್ತದೆ
ಆದರೆ ,
ಸಂದರ್ಭ ಆ ಜನರ ನಿಜ ವಾದ ಮುಖವನ್ನು ಪರಿಚಯಿಸುತ್ತದೆ.
Share On
141
ಮನಸು ಎಂಬುದು ಅತ್ಯಂತ ಫಲವತ್ತಾದ ಜಾಗ
ಅಲ್ಲಿ ನೀವು ಪ್ರೇಮ ,ದ್ವೇಷ, ಮತ್ಸರ, ಕರುಣೆ ಹೀಗೆ ಏನನ್ನೇ ಬಿತ್ತಿದರು ಸೋಂಪಾಗಿ ಬೆಳೆಯುತ್ತದೆ.
ಆದರೆ ಅಲ್ಲಿ ಏನೇ ಬೆಳೆದರೂ ನಾವೇ ತಿನ್ನಬೇಕು ಎನ್ನುವುದು ಮಾತ್ರ ಕಡ್ಡಾಯ.
Share On
142
ತೊಂದರೆ ಬಂದಾಗ ಪ್ರಾಮಾಣಿಕವಾಗಿ,
ಸಂಪತ್ತು ಬಂದಾಗ ಸರಳವಾಗಿ,
ಅಧಿಕಾರ ಬಂದಾಗ ವಿನಯದಿಂದ ಮತ್ತು
ಕೋಪ ಬಂದಾಗ ಶಾಂತವಾಗಿ ಇರುವವನೇ ಜೀವನದಲ್ಲಿ ಎತ್ತರಕ್ಕೆರುತ್ತಾನೆ.
ಕಾಲ ಬದಲಾಗಿದೆ ಅನ್ನೋದು ತಪ್ಪು,
ಕಾಲದಲ್ಲಿ ಬದುಕುವ ನಮ್ಮ ಮನಸ್ಥಿತಿಗಳು ಬದಲಾಗಿವೆ.
Share On
143
ಕಷ್ಟಗಳು ನಮಗೆ ವೇದನೆಯನ್ನು ಮಾತ್ರ ಕೊಡುತ್ತವೆ ಎಂದು
ಭಾವಿಸಬಾರದು ,
ನಾವು ಕಷ್ಟದಲ್ಲಿದ್ದಾಗ ನಿಜವಾದ ಮಿತ್ರರು ಯಾರು ,
ಹಿತಚಿಂತಕರು ಯಾರು ಎಂಬುದು ಗೊತ್ತಾಗುತ್ತದೆ .
ನಾವು ಯಾರನ್ನು ಆಪ್ತರು ಎಂದುಕೊಳ್ಳುತ್ತೇವೋ
ಅವರು ನಮ್ಮ ಕಷ್ಟದಲ್ಲಿನಿಜ ಬಣ್ಣ ತ್ತೋರುತ್ತಾರೆ.
Share On
144
ಸಂಪತ್ತಿನ ಬೆಲೆಯೇ ಬೇರೆ...
ಸಂಸ್ಕಾರದ ಬೆಲೆಯೇ ಬೇರೆ...
ವ್ಯಕ್ತಿತ್ವವನ್ನು ಬಟ್ಟೆ ಅಥವಾ ಆಭರಣಗಳ ಸಂಪತ್ತಿನಿಂದ ಅಳೆಯಲು ಹೋಗಬೇಡಿ...
ವ್ಯಕ್ತಿಗೆ ಗುಣವೇ ಸಂಪತ್ತು, ಸಂಸ್ಕಾರವೇ ಅವನ ಐಶ್ವರ್ಯ
Share On
145
ಕಾದ ಹಂಚಿನ ಮೇಲೆ ಹನಿ ನೀರು ಬಿದ್ದರೆ ಆರಿ ಹೊಗುತ್ತದೆ,
ಎಲೆಯ ಮೇಲೆ ಬಿದ್ದರೆ ಹೊಳೆಯುತ್ತದೆ.
ಚಿಪ್ಪಿನೊಳಗೆ ಬಿದ್ದರೆ ಮುತ್ತಾಗುತ್ತದೆ,
ನಾವು ಯಾರ ಸಂಗ ಮಾಡುತ್ತೇವೋ ಅದರಂತೆ ನಾವಾಗುತ್ತೇವೆ.
Share On
146
ಯಾರು ಶ್ರೇಷ್ಠರು ಅಲ್ಲ , ಕನಿಷ್ಠರು ಅಲ್ಲ
ಪ್ರತಿಯೊಬ್ಬರಿಗೂ ಅವರದ್ದೇ ಆದ ವೈಶಿಷ್ಟ ಗಳಿರುತ್ತವೆ
ಯಾರನ್ನು ಯಾರಿಗೂ ಹೋಲಿಸದೆ ಎಲ್ಲರನ್ನೂ ಗೌರವಿಸೋಣ.
Share On
147
ಕೈ ಕೈ ಜೋಡಿಸು,
ಲೋಕವನ್ನು ಬದಲಾಯಿಸು
Share On
148
ಬಯಸಿದ್ದೆಲ್ಲ ಸಿಗುವಂತಿದ್ದರೆ ಬಯಕೆಗೆ ಬೆಲೆ ಇರುತ್ತಿರಲಿಲ್ಲ,
ಅನಿಸಿದ್ದೆಲ್ಲ ಹೇಳುವಂತಿದ್ದರೆ ಮೌನಕ್ಕೆ ಅರ್ಥ ಇರುತ್ತಿರಲಿಲ್ಲ,
ತಪ್ಪುಗಳೇ ಆಗದಿದ್ದರೆ ಹೊಸ ಪ್ರಯತ್ನ ಪಡುತ್ತಿರಲಿಲ್ಲ,
ಕಣ್ಣೀರೇ ಬರದಿದ್ದರೆ ನಗುವಿನ ಆನಂದ ತಿಳಿಯುತ್ತಿರಲಿಲ್ಲ,
ಕಷ್ಟಗಳು ಎದುರಾಗದಿದ್ದರೆ ಜೀವನದ ಮೌಲ್ಯ ಗೊತ್ತಾಗುತ್ತಿರಲಿಲ್ಲ.
Share On
149
ಛತ್ರಿಯು ಮಳೆಯನ್ನು ನಿಲ್ಲಿಸುವುದಿಲ್ಲ
ಬದಲಿಗೆ ನಮಗೆ ಮಳೆಯಲ್ಲಿ ನಿಲ್ಲುವ ಧೈರ್ಯವನ್ನು ಕೊಡುತ್ತದೆ.
ಹಾಗೆಯೇ,
ಆತ್ಮವಿಶ್ವಾಸವು ನಮಗೆ ಯಶಸ್ಸನ್ನು ಕೊಡದಿದ್ದರು ಸಮಸ್ಯೆಯನ್ನು ಎದುರಿಸುವ ಶಕ್ತಿಯನ್ನು ಕೊಡುತ್ತದೆ.
Share On
150
ತೂತು ಬಿದ್ದ ದೋಣಿಯಲ್ಲಿ ನದಿ ದಾಟುವುದು ಒಂದೇ,
ಮೋಸ ವಂಚನೆ ನಂಬಿಕೆ ಮತ್ತು ದ್ರೋಹ
ಮಾಡುವಂತಹ ಸಮಯ ಸಾಧಕರ
ಸ್ನೇಹ ಮಾಡುವದೂ ಒಂದೇ.
Share On
151
ಜಗತ್ತಿನಲ್ಲಿ ಅಗ್ಗದ ವಸ್ತುವೆಂದರೆ ಸಲಹೆ
ಒಬ್ಬರನ್ನು ಕೇಳಿದರೆ ಸಾವಿರ ಜನ ನೀಡುತ್ತಾರೆ.
ಜಗತ್ತಿನ ದುಬಾರಿ ವಸ್ತುವೆಂದರೆ ಸಹಾಯ
ಸಾವಿರ ಜನರನ್ನು ಕೇಳಿದಾಗ,
ಒಬ್ಬರು ಮಾಡುತ್ತಾರೆ.
Share On
152
ಮೂರು ಬಿಟ್ಟವರು
ಊರಿಗೆ ದೊಡ್ಡವರು
Share On
153
ಒಂದು ಸಣ್ಣ ನಗು ಸ್ನೇಹವನ್ನು ಪ್ರಾರಂಭಿಸುತ್ತದೆ.
ಒಂದು ಒಳ್ಳೆಯ ಮಾತು ದ್ವೇಷವನ್ನು ಕೊನೆಗೊಳಿಸುತ್ತದೆ.
ಒಳ್ಳೆಯ ಮನಸ್ಸು ಸಂಬಂಧಗಳನ್ನು ಕಾಪಾಡುತ್ತದೆ.
ಒಳ್ಳೆಯ ವ್ಯಕ್ತಿತ್ವ ಜೀವನವನ್ನೇ ಬದಲಾಯಿಸುತ್ತದೆ.
Share On
154
ಸಂಪತ್ತು ಎಷ್ಟೇ ಇದ್ದರು
ಸರಳತೆ ಮಾತ್ರ ಮನುಷನಿಗೆ ಬೆಲೆ ಕೊಡುತ್ತದೆ.
ಏಕೆಂದರೆ ಸಂಪತ್ತಿಗೆ ಬೆಲೆ ಕಟ್ಟಬಹುದು
ಆದರೆ ಸರಳತೆಗೆ ಬೆಲೆ ಕಟ್ಟಲಾಗುದಿಲ.
Share On
155
ಹೋಟೆಲ್ನಲ್ಲಿ ತಿನ್ಲಿಕ್ಕೆ ಹಣ ಬೇಕು
ಅಮ್ಮನ ಕೈ ತುತ್ತು ತಿನ್ನಲು ಋಣ ಬೇಕು.
Share On
156
ಓಡಿದವನಿಗೆ ಓಣಿ ಕಾಣಲಿಲ್ಲ,
ಹಾಡಿದವನಿಗೆ ಹಾದಿ ಕಾಣಲಿಲ್ಲ.
Share On
157
ಧೈರ್ಯವಿದ್ದವನಿಗೆ ದೈವವೂ
ಅನುಕೂಲ
Share On
158
ಮನೆಯೆಂಬ ಮರ ಮುರಿಯಬಾರದು,
ಮನಸ್ಸೆಂಬ ಮಾರ್ಗ ಕತ್ತರಿಸಬಾರದು.
Share On
159
ಉತ್ತಮನು ಎತ್ತ ಹೋದರೂ ಶುಭವೇ
Share On
160
ಧನಾತ್ಮಕ ಮನಸ್ಸು ಎಲ್ಲದರಲ್ಲೂ ಅವಕಾಶವನ್ನು ಕಂಡುಕೊಳ್ಳುತ್ತದೆ.
ಸಕಾರಾತ್ಮಕ ಮನಸ್ಸು ಎಲ್ಲದರಲ್ಲೂ ದೋಷವನ್ನು ಕಂಡುಕೊಳ್ಳುತ್ತದೆ.
Share On
161
ಎತ್ತರಕ್ಕೆ ಬೇಳಿಬೇಕು ನಿಜಾ..!
ಅದಕ್ಕಾಗಿ ಮೆಟ್ಟಿಲುಗಳನ್ನು ತುಳಿಬೇಕೆ ಹೊರತು ಇನ್ನೊಬ್ಬರನ್ನು ತುಳಿದು ಅಲ್ಲ
Share On
162
ಅವಶ್ಯಕತೆ ಮುಗಿದ ಮೇಲೆ ಆತ್ಮವೇ ದೇಹನ ಬಿಟ್ಟು ಹೋಗುತ್ತೆ.
ಇನ್ನು ಮನುಷ್ಯರು ಯಾವ ಲೆಕ್ಕ.
Share On
163
ನೀವು ಹೋಗತ್ತಿರುವ ದಾರಿಯಲ್ಲಿ ಯಾವುದೇ ಅಡಚಣೆಗಳು ಎದುರಾಗದಿದ್ದಲ್ಲಿ
ನೀವು ಸರಿಯಾದ ದಾರಿಯಲ್ಲಿ ಹೋಗುತ್ತಿಲ್ಲ ಎಂದರ್ಥ
Share On
164
ಯಾರಿಗೆ ಅನ್ನದ ಋಣ ಎಲ್ಲಿ ಇರುತ್ತದೆಯೋ ಅಲ್ಲಿಗೆ
ಸಮಯವೇ ಅವರನ್ನು ಕರೆದುಕೊಂಡು ಹೋಗುತ್ತದೆ
Share On
165
ಯಾರಿಗೆ ಅನ್ನದ ಋಣ ಎಲ್ಲಿ ಇರುತ್ತದೆಯೋ ಅಲ್ಲಿಗೆ
ಸಮಯವೇ ಅವರನ್ನು ಕರೆದುಕೊಂಡು ಹೋಗುತ್ತದೆ
Share On
166
ಮನುಷ್ಯನು ಮುಹೂರ್ತ ಇಲ್ಲದೆ ಹುಟ್ಟುತ್ತಾನೆ ಮತ್ತು ಮುಹೂರ್ತ ಇಲ್ಲದೆ ಸಾಯುತ್ತಾನೆ.
ಆದರೂ ಕೂಡ ಜೀವನ ಪರ್ಯತ ಶುಭ ಮುಹೂರ್ತದ ಹಿಂದೆ ಓಡುತ್ತಾ ಇರುತ್ತಾನೆ.
Share On
167
ನೀವು ಬೇರೆಯವರ ತಪ್ಪುಗಳಿಂದ ಕಲಿಯಬೇಕು.
ಏಕೆಂದರೆ ಎಲ್ಲ ತಪ್ಪುಗಳನ್ನು ನೀವೇ ಮಾಡಿ ಕಲಿಯುವಷ್ಟು ದೊಡ್ಡ ಜೀವನ ನಿಮ್ಮ ಬಳಿಯಿಲ್ಲ.
Share On
168
ಬೆಳ್ಳಗಿರೋದೆಲ್ಲ ಹಾಲಲ್ಲ,
ಹೊಳೆಯೋದೆಲ್ಲ ಚಿನ್ನ ಅಲ್ಲ.
Share On
169
ಊರೆಲ್ಲ ದೋಚಿಕೊಂಡು ಹೋದಮೇಲೆ
ಕೋಟೆ ಬಾಗಿಲು ಹಾಕಿದರಂತೆ.
Share On
170
ಹುಣಸೆ ಹುಳಿಯೆಂದು
ಅಂಬಡೆ ತಿಂದ ಹಾಗೆ
Share On
171
ಹರೆಯಕ್ಕೆ ಬಂದಾಗ
ಹಂದಿನೂ ಚಂದ
Share On
172
ತನ್ನೂರಲ್ಲಿ ರಂಗ,
ಪರೂರಲ್ಲಿ ಮಂಗ
Share On
173
ಹಗಲು ಅರಸನ ಕಾಟ
ಇರುಳು ದೆವ್ವದ ಕಾಟ
Share On
174
ಕೊಟ್ಟಿದ್ದು ತನಗೆ
ಬಚ್ಚಿಟ್ಟಿದ್ದು ಪರರಿಗೆ
Share On
175
ನಿನ್ನದಲ್ಲ ಸರ್ವ ಆಸ್ತಿ,
ಒಳ್ಳೆಯದಲ್ಲ ಗರ್ವ ಜಾಸ್ತಿ
Share On
176
ಕಣ್ಣಿಗೆ ಕಾಡಿಗೆ ಹಾಕದ ಹೆಣ್ಣು
ಸಪ್ಪಗೆ ಕಂಡಳು
Share On
177
ಉಗಮವಾಗದಿರಲಿ ಹಿಂಸೆ,
ಹೆಚ್ಚಿಗೆಯಾಗದಿರಲಿ ಆಸೆ.
Share On
178
ಚೆಲ್ಲಿಲ್ಲಿ ಮುಕ್ಕ ಎಲ್ಲಿದ್ದರೇನು
ಮಾಡಿದ ರಾಗೀಲಿ ಕಲ್ಲಿದ್ದರೇನು
Share On
179
ಚಿನ್ನದಂಥ ಮಕ್ಕಳು
ಹೆಣ್ಣಾದ್ರೇನು ಗಂಡಾದ್ರೇನು.
Share On
180
ಚಿಕ್ಕ ಮಡಿಕೆ
ಚೊಕ್ಕ ಬೋಜನ
Share On
181
ಚಾಡಿಕೋರನಿಗೆ
ಊರೆಲ್ಲ ನೆಂಟರು
Share On
182
ಚಪ್ಪರಕ್ಕೆ ಗತಿಯಿಲ್ಲದವ
ಉಪ್ಪರಿಗೆಯನಪೇಕ್ಷಿಸಿದ
Share On
183
ಉಗಿದರೆ ತುಪ್ಪ ಕೆಡುತ್ತದೆ,
ನುಂಗಿದರೆ ಗಂಟಲು ಕೆಡುತ್ತದೆ
Share On
184
ಉಂಡಿದ್ದು ಹೊಟ್ಟೆಗಾಗಿ,
ಮಾಡಿದ್ದು ಬಟ್ಟೆಗಾಗಿ.
Share On
185
ಉಂಡದ್ದು ಊಟ ಆಗಲಿಲ್ಲ,
ಕೊಂಡದ್ದು ಕೂಟ ಆಗಲಿಲ್ಲ
Share On
186
ಆಕಳು ದಾನಕ್ಕೆ ಕೊಟ್ರೆ,
ಹಲ್ಲು ಹಿಡಿದು ನೊಡಿದ್ರಂತೆ.
Share On
187
ಪುಣ್ಯ ಉಂಡು ತೀರಿತು,
ಪಾಪ ತಿಂದು ತೀರಿತು
Share On
188
ರಾಗಿ ಇದ್ರೆ ರಾಗ
ರಾಗಿ ಇಲ್ದಿದ್ರೆ ರೋಗ
Share On
189
ಮನಸ್ಸಿಲ್ಲದವಳ ಒಡನಾಟ
ಮಾತುಮಾತಿಗು ಬೇಸರ
Share On
190
ಬಾಯಲ್ಲಿ ಬೆಣ್ಣೆ
ಬಗಲಲ್ಲಿ ದೊಣ್ಣೆ.
Share On
191
ಬರೋಳನ್ನು ನೆಚ್ಚಿ
ಇರೋಳನ್ನು ಬಿಟ್ಟ
Share On
192
ಪರಿಚಿತರ ಮರೆಯಬೇಡ,
ಅಪರಿಚಿತರ ನಂಬಬೇಡ
Share On
193
ಚೆಲ್ಲಿದ ಹಾಲಿಗೆ,
ಒಡೆದ ಕನ್ನಡಿಗೆ
ಎಂದೂ ಅಳಬೇಡ.
Share On
194
ಚಿನ್ನ ತಿನ್ನಬೇಕಾದ್ರೆ
ಮೇಣದಂತಾ ಹಲ್ಲು ಬೇಕು.
Share On
195
ಚಿತ್ತಾ ಮಳೆ
ವಿಚಿತ್ರ ಬೆಳೆ!
Share On
196
ಚಿಕ್ಕ ಮೀನು
ದೊಡ್ಡ ಮೀನು
ನುಂಗಿತಂತೆ
Share On
197
ಆಗೋ ಪೂಜೆ ಆಗುತ್ತಿರಲಿ
ಊದೋ ಶಂಖ ಊದಿ ಬಿಡುವ
Share On
198
ನಮಸ್ಕಾರ ಮಾಡಲು ಹೋಗಿ
ದೇವಸ್ಥಾನದ ಗೋಪುರ ತಲೇ ಮೇಲೆ ಬಿತ್ತು